ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ಇತ್ತೀಚಿನ ಟ್ವೀಟ್ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದೆ. 'ಮಾಲ್ಗುಡಿಯಲ್ಲಿ ನನ್ನ ಬ್ಯುಸಿಯಾಗಿಟ್ಟಿರುವುದೇನು...' ಎಂದು ಬರೆದು 'ಎ ಟೌನ್ ಕಾಲ್ಡ್ ಮಾಲ್ಗುಡಿ' ಪುಸ್ತಕವನ್ನು ಓದುತ್ತಿರುವ ಫೋಟೋವನ್ನು ಚಿರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಮುಂದಿನ ಯೋಜನೆಗೆ ಸಂಬಂಧಿಸಿದ್ದೇ ಎಂಬ ಸಂದೇಹ ಏಳುವುದಕ್ಕೂ, ನಿರ್ದೇಶಕ ಕೆ ಎಂ ಚೈತನ್ಯ ಆರ್ ಕೆ ನಾರಾಯಣ್ ಅವರ ಕಾದಂಬರಿ 'ಮ್ಯಾನ್ ಈಟರ್ ಆಫ್ ಮಾಲ್ಗುಡಿ'ಯನ್ನು ಸಿನೆಮಾಗೆ ಅಳವಡಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗೂ ಸಂಬಂಧ ಬೆಸೆಯುವಂತೆ ಮಾಡಿದೆ.