'ಜಾಗ್ವಾರ್' ಸಿನಿಮಾಗಾಗಿ ಅತ್ಯುತ್ತಮ ಪಾದಾರ್ಪಣ ನಟ ಪ್ರಶಸ್ತಿ ಸ್ವೀಕರಿಸಿದ ನಿಖಿಲ್

'ಜಾಗ್ವಾರ್' ಸಿನೆಮಾದ ಕನ್ನಡ ಮತ್ತು ತೆಲುಗು ಅವತರಿಣಿಕೆಯಲ್ಲಿ ಪಾದಾರ್ಪಣೆ ಮಾಡಿದ ನಟ ನಿಖಿಲ್ ಕುಮಾರ್ ಅವರಿಗೆ ಅತ್ಯುತ್ತಮ ಪಾದಾರ್ಪಣ ನಟ- ಟಿ ಎಸ್ ಆರ್ (ಟಿ ಸುಬ್ರಮಣ್ಯ ರೆಡ್ಡಿ) ಪ್ರಶಸ್ತಿ ದೊರಕಿದೆ.
ಚಿರಂಜೀವಿ ಮತ್ತು ಬಾಲಕೃಷ್ಣ ಇವರಿಂದ ಟಿ ಎಸ್ ಆರ್ ಪ್ರಶಸ್ತಿ ಸ್ವೀಕರಿಸಿದ ನಿಖಿಲ್
ಚಿರಂಜೀವಿ ಮತ್ತು ಬಾಲಕೃಷ್ಣ ಇವರಿಂದ ಟಿ ಎಸ್ ಆರ್ ಪ್ರಶಸ್ತಿ ಸ್ವೀಕರಿಸಿದ ನಿಖಿಲ್
ಬೆಂಗಳೂರು: 'ಜಾಗ್ವಾರ್' ಸಿನೆಮಾದ ಕನ್ನಡ ಮತ್ತು ತೆಲುಗು ಅವತರಿಣಿಕೆಯಲ್ಲಿ ಪಾದಾರ್ಪಣೆ ಮಾಡಿದ ನಟ ನಿಖಿಲ್ ಕುಮಾರ್ ಅವರಿಗೆ  ಅತ್ಯುತ್ತಮ ಪಾದಾರ್ಪಣ ನಟ- ಟಿ ಎಸ್ ಆರ್ (ಟಿ ಸುಬ್ರಮಣ್ಯ ರೆಡ್ಡಿ) ಪ್ರಶಸ್ತಿ ದೊರಕಿದೆ. ಶನಿವಾರ ವೈಜಾಗ್ ನಲ್ಲಿ ನಡೆದ ಸಮಾರಂಭದಲ್ಲಿ ನಿಖಿಲ್, ತೆಲುಗು ನಟರಾದ ಚಿರಂಜೀವಿ ಮತ್ತು ಬಾಲಕೃಷ್ಣ ಅವರಿಂದ ಪ್ರಶಸ್ತಿ ಪಡೆದಿದ್ದಾರೆ. 
ಈ ಪ್ರಶಸ್ತಿ ಪಡೆದು ಸಂತಸರಾಗಿರುವ ನಿಖಿಲ್ "ನನ್ನ ಶ್ರಮವನ್ನು ಗುರುತಿಸಿರುವುದಕ್ಕೆ ನನಗೆ ನಂತಸವಾಗಿದೆ. ಕೊನೆಗೆ ಜನರೇ ಎಲ್ಲವನ್ನು ನಿರ್ಧರಿಸುವವರು" ಎಂದಿದ್ದಾರೆ. 
ತೆಲುಗಿನ ಜನಪ್ರಿಯ ನಟರೊಂದಿಗೆ ವೇದಿಕೆ ಹಂಚಿಕೊಂಡದ್ದಕ್ಕೆ ಖುಷಿಯಾಗರುವ ನಿಖಿಲ್, ವೈಜಾಗ್ ಜನ ಅವರನ್ನು ಗುರುತಿಸಿ 'ಜಾಗ್ವಾರ್'-'ಜಾಗ್ವಾರ್' ಎಂದು ಮಂತ್ರಘೋಷ ಮೊಳಗಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ನನ್ನ ಸಿನೆಮಾ ಬಿಡುಗಡೆಯ ನಂತರ ಈ ಜಾಗಕ್ಕೆ ನಾನು ಭೇಟಿ ಕೊಟ್ಟಿರಲಿಲ್ಲ. ಆದರೆ ಅವರು ನನ್ನ ಸಿನೆಮಾವನ್ನು ನೆನಪಿಸಿಕೊಂಡು ಗುರುತಿಸಿದರು ಮತ್ತು ಇದಕ್ಕೆ ನಾನು ಸಂತಸಗೊಂಡಿದ್ದೇನೆ" ಎನ್ನುತ್ತಾರೆ. 
ಚೇತನ್ ಕುಮಾರ್ ನಿರ್ದೇಶನದ ನೂತನ ಚಿತ್ರಕ್ಕೆ ನಿಖಿಲ್ ಸಿದ್ಧರಾಗುತ್ತಿದ್ದಾರೆ. "ನಾನು ಪ್ರತಿ ಸಿನೆಮಾದೊಂದಿಗೆ ಉತ್ತಮಗೊಳ್ಳಲಿದ್ದೇನೆ" ಎನ್ನುತ್ತಾರೆ ನಟ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com