ತಮ್ಮೆಲ್ಲಾ ಯಶಸ್ಸಿಗೆ ಅಭಿಮಾನಿಗಳೇ ಕಾರಣ ಎನ್ನುವ ದರ್ಶನ್ "ಈಗ ನಮ್ಮ ಜೊತೆ ಇಲ್ಲದ ಪತ್ರಕರ್ತ ವಿಜಯ್ ಸಾರಥಿಯವರನ್ನು ನಾನು ಯಾವಾಗಲೂ ನೆನೆಯುತ್ತಿರುತ್ತೇನೆ. ನನಗೆ 'ಬಾಕ್ಸ್ ಆಫೀಸ್ ಸುಲ್ತಾನ್' ಎಂಬ ಬಿರುದು ನೀಡಿದ್ದು ಅವರೇ. ಜನ ಆ ಬಿರುದನ್ನೂ ಮತ್ತೆ ಮತ್ತೆ ಪುನರುಚ್ಚರಿಸಿದ್ದರೂ, ಅವರೇ ಮೊದಲಿಗೆ ಆ ಬಿರುದು ನೀಡಿದ್ದು. ಅವರೇ ನನಗೆ ಮೊದಲು ಹರಸಿದ್ದು" ಎನ್ನುತ್ತಾರೆ.