ನನ್ನ ಸಂಗೀತ ಕನ್ನಡ ಚಿತ್ರರಂಗದ ದಂತಕಥೆಯನ್ನು ನೆನಪಿಸುತ್ತಿರುವುದು ನನ್ನ ಅದೃಷ್ಟ: ಹರಿಕೃಷ್ಣ

ವಿ ಹರಿಕೃಷ್ಣ ಸಂಗೀತ ನೀಡಿದ್ದ 'ರಾಜಕುಮಾರ' ಸಿನೆಮಾ ಬೊಂಬೆ ಹಾಡು ಬಹಳ ಜನಪ್ರಿಯವಾಗಿ ೫೦ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದ್ದಲ್ಲದೆ ಚಲನಚಿತ್ರದ ಯಶಸ್ಸಿಗೂ ಸಹಕರಿಸಿದೆ.
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Updated on
ಬೆಂಗಳೂರು: ವಿ ಹರಿಕೃಷ್ಣ ಸಂಗೀತ ನೀಡಿದ್ದ 'ರಾಜಕುಮಾರ' ಸಿನೆಮಾ ಬೊಂಬೆ ಹಾಡು ಬಹಳ ಜನಪ್ರಿಯವಾಗಿ ೫೦ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದ್ದಲ್ಲದೆ ಚಲನಚಿತ್ರದ ಯಶಸ್ಸಿಗೂ ಸಹಕರಿಸಿದೆ. ಈ ಹಾಡು ಡಾ. ರಾಜಕುಮಾರ್ ಅವರ ಕಸ್ತೂರಿ ನಿವಾಸದ ನೆನಪುಗಳನ್ನು ಮರುಕಳಿಸಿತ್ತು. ಅವರ ಮುಂದಿನ ಆಲ್ಬಮ್ ಕೂಡ ಮತ್ತೊಂದು ಖ್ಯಾತ ಸಿನೆಮಾವನ್ನು ನೆನಪಿಸಲಿದೆಯಂತೆ. 
ಯೋಗಿ ಜಿ ರಾಜ್ ನಿರ್ದೇಶನದ, ಶಿವರಾಜ್ ಕುಮಾರ್ ನಟಿಸುತ್ತಿರುವ 'ಬಂಗಾರ S/O ಬಂಗಾರದ ಮನುಷ್ಯ' ಸಿನೆಮಾಗೆ ಕೂಡ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ರಾಜಕುಮಾರ್ ಅವರ ಕ್ಲಾಸಿಕ್ ಸಿನೆಮಾ 'ಬಂಗಾರದ ಮನುಷ್ಯ'ನ ನೆನಪು ಹೊತ್ತು ತರುವ ಈ ಹೊಸ ಸಿನೆಮಾವನ್ನು ಕರ್ನಾಟಕ ಮತ್ತು ವಿಶ್ವದ ರೈತರಿಗೆ ಅರ್ಪಿಸಿದ್ದಾರೆ ನಿರ್ದೇಶಕ ಯೋಗಿ. 
ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಏಪ್ರಿಲ್ ೨೪ ರಂದು 'ಬಂಗಾರ s / o ಬಂಗಾರದ ಮನುಷ್ಯ' ಸಿನೆಮಾದ ಆಡಿಯೋ ಬಿಡುಗಡೆ ನೆರವೇರಲಿದೆ. "ನನಗೆ ಇಂತಹ ಸಿನೆಮಾಗಳಿಗೆ ಸಂಗೀತ ನೀಡಲು ಅವಕಾಶ ಸಿಕ್ಕಾಗ, ಮತ್ತು ಕನ್ನಡ ಚಿತ್ರರಂಗದ ದಂತಕಥೆಯನ್ನು ನೆನಪಿಸುವುದಕ್ಕೆ ಅದಕ್ಕೆ ಸಾಧ್ಯವಾದರೆ, ಆ ಮೇರು ನಟರಿಗೆ ನಾನು ಸಂಗೀತ ನೀಡುತ್ತಿದ್ದೇನೆ ಎನ್ನುವಷ್ಟು ಸಂತಸವಾಗುತ್ತದೆ. ಆ ಮಟ್ಟಿಗೆ ನಾನು ಅದೃಷ್ಟಶಾಲಿ" ಎನ್ನುತ್ತಾರೆ. 
"'ಒಂದು ಊರಲಿ ಒಬ್ಬ ರಾಜನಿದ್ದ' ಎಂಬ ಹಾಡು ಈ ಆಲ್ಬಮ್ ನ ಮುಖ್ಯಾಂಶ ಎನ್ನುವ ಅವರು, ಇದು ರೈತರ ಬಗೆಗಿನ ಸಿನೆಮಾ ಆದ್ದರಿಂದ ಹಲವರ ಹೃದಯವನ್ನು ಗೆಲುವ ಭರವಸೆಯಿದೆ. ಬೊಂಬೆ ಹಾಡಿನಂತೆಯೇ ಈ ಹಾಡು ಕೂಡ ಸಿನೆಮಾ ಜೊತೆಗೆ ಸಾಕಷ್ಟು ಬೆರೆತಿದೆ" ಎನ್ನುತ್ತಾರೆ ಸಂಗೀತ ನಿರ್ದೇಶಕ. 
ಜಯಣ್ಣ ಕಂಬೈನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿದ್ಯಾ ಪ್ರದೀಪ್ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನೆಮಾ ಮೇನಲ್ಲಿ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com