'ಸಂಜು ವೆಡ್ಸ್ ಗೀತಾ' ಮತ್ತು 'ಮೈನಾ'ದಂತಹ ಹಿಟ್ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಸತ್ಯ, ಒಳ್ಳೆಯ ಕಥೆಗೆ ಒಳ್ಳೆಯ ಹಿನ್ನಲೆ ದೃಶ್ಯಗಳು ಬೇಕು. ಅದು ಇಲ್ಲದೆ ಹೋದರೆ ಸ್ಕ್ರಿಪ್ಟ್ ಎಷ್ಟೇ ಭದ್ರವಾಗಿದ್ದರೂ ಬಿದ್ದುಹೋಗುತ್ತದೆ ಎನ್ನುತ್ತಾರೆ. "'ಸಂಜು ವೆಡ್ಸ್ ಗೀತಾ'ದಲ್ಲಿ ತೋರಿಸಲಾದ ಬೀದರ್ ನ ಸುಂದರ ತಾಣಗಳಾಗಲೀ ಅಥವಾ ಮೈನಾದಲ್ಲಿ ತೋರಿಸಲಾದ ದೂಧ್ ಸಾಗರ್ ಜಲಪಾತವಾಗಲಿ ಸಿನೆಮಾಗೆ ಸಹಕರಿಸಿವೆ. ದೂಧ್ ಸಾಗರ್ ಜಲಪಾತವನ್ನು ಮೈನಾ ಜಲಪಾತ ಎಂದೇ ಜನ ಈಗ ಕರೆಯುತ್ತಾರೆ. ಕನ್ನಡ ಚಿತ್ರರಂಗದ ಮೂಲಕ ರಾಜ್ಯದ ಅತ್ಯುತ್ತಮ ಪಾತ್ರಗಳನ್ನೂ ಸೆರೆಹಿಡಿದಿರುವುದಕ್ಕೆ ಖುಷಿಯಿದೆ. ಸ್ಕ್ರಿಪ್ಟ್ ಗೆ ಹೊಂದಾಣಿಕೆಯಾದಾಗ ಮಾತ್ರ ಛಾಯಾಗ್ರಹಣ ಸುಂದರವಾಗುವುದು, ಮತ್ತು ನಿರ್ದೇಶಕರ ಹಾಗು ನನ್ನ ಹೊಳಹುಗಳು ಸೇರಿದಾಗಲೇ ಇದು ಯಶಸ್ವಿಯಾಗುವುದು" ಎನ್ನುತ್ತಾರೆ ಸತ್ಯ ಹೆಗಡೆ.