ಪ್ರೇಕ್ಷಕರ ಪ್ರೀತಿ ಬೆಂಬಲದಿಂದ ತೀವ್ರ ಸಂತಸಗೊಂಡಿದ್ದೇನೆ: ರಮ್ಯ ಕೃಷ್ಣ

'ಬಾಹುಬಲಿ೨:ಅಂತ್ಯ' ಸಿನೆಮಾದಲ್ಲಿ ರಾಣಿ ಶಿವಗಾಮಿ ಪಾತ್ರದಲ್ಲಿ ನಟಿಸಿರುವ ನಟಿ ರಮ್ಯ ಕೃಷ್ಣ, ಸಿನೆಮಾದ ನಟನೆಗಾಗಿ ಪ್ರೇಕ್ಷಕರು ಪ್ರೀತಿ ಮತ್ತು ಬೆಂಬಲ ದೊಡ್ಡ ಮಟ್ಟದಲ್ಲಿ ತೋರುತ್ತಿರುವುದಕ್ಕೆ ತೀವ್ರ
ರಮ್ಯ ಕೃಷ್ಣ
ರಮ್ಯ ಕೃಷ್ಣ
ಚೆನ್ನೈ: 'ಬಾಹುಬಲಿ೨:ಅಂತ್ಯ' ಸಿನೆಮಾದಲ್ಲಿ ರಾಣಿ ಶಿವಗಾಮಿ ಪಾತ್ರದಲ್ಲಿ ನಟಿಸಿರುವ ನಟಿ ರಮ್ಯ ಕೃಷ್ಣ, ಸಿನೆಮಾದ ನಟನೆಗಾಗಿ ಪ್ರೇಕ್ಷಕರು ಪ್ರೀತಿ ಮತ್ತು ಬೆಂಬಲ ದೊಡ್ಡ ಮಟ್ಟದಲ್ಲಿ ತೋರುತ್ತಿರುವುದಕ್ಕೆ ತೀವ್ರ ಸಂತಸಗೊಂಡಿದುವುದಾಗಿ ಶನಿವಾರ ಹೇಳಿದ್ದಾರೆ. 
"ನಿಮೆಲ್ಲರನ್ನು ಪ್ರೀತಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ಆದರ ಮತ್ತು ಬೆಂಬಲ ಇಲ್ಲವಾಗಿದ್ದರೆ ನನ್ನ ಈ ಸ್ಥಿತಿ ಸಾಧ್ಯವಾಗುತ್ತಿರಲಿಲ್ಲ. ನಾನು ತೀವ್ರ ಸಂತಸಗೊಂಡಿದ್ದೇನೆ" ಎಂದು ರಮ್ಯ ಟ್ವೀಟ್ ಮಾಡಿದ್ದಾರೆ. 
ಬಾಹುಬಲಿ ಸಿನೆಮಾದ ಎರಡು ಭಾಗಗಳಲ್ಲಿ ನಟಿಸಿರುವ ರಮ್ಯ ಅವರ ನಟನೆ ವಿಮರ್ಶಕರ ಮತ್ತು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಪಾತ್ರದ ಜನಪ್ರಿಯತೆ ಎಷ್ಟಿತ್ತೆಂದರೆ 'ದ ರೈಸ್ ಆಫ್ ಶಿವಗಾಮಿ' ಎಂಬ ಪುಸ್ತಕ ಕೂಡ ಬಿಡುಗಡೆಯಾಗಿತ್ತು. ರಮ್ಯ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ಮಾಪಕ ಶೋಬು ಯರ್ಲಗಡ್ಡ ಮತ್ತು ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com