ಹೆಚ್ ಡಿಕೆ ಆಡಳಿತ ಕುರಿತು ಸಿನಿಮಾ: ಅರ್ಜುನ್ ಸರ್ಜಾ ನಾಯಕ

ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯವರ ಕುರಿತು ಚಿತ್ರ ನಿರ್ದೇಶಕ...
ಎಚ್ ಡಿ ಕುಮಾರ ಸ್ವಾಮಿ
ಎಚ್ ಡಿ ಕುಮಾರ ಸ್ವಾಮಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯವರ ಕುರಿತು ಚಿತ್ರ ನಿರ್ದೇಶಕ ಎಸ್.ನಾರಾಯಣ್ ಚಿತ್ರ ನಿರ್ಮಿಸಲು ಹೊರಟಿದ್ದಾರೆ. 
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ 20 ತಿಂಗಳ ಆಡಳಿತಾವಧಿಯ ವಿಷಯಗಳು, ಅವರ ಅಧಿಕಾರದಲ್ಲಿ ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳು, ಅವರು ಜನರಿಗೆ ಉಪಯೋಗವಾಗುವಂತಹ ಏನೇನು ಕಾರ್ಯಕ್ರಮಗಳನ್ನು ತಂದರು ಮತ್ತು ಅವರ ಜೀವನದ ಕೆಲವು ಸಂಗತಿಗಳು ಚಿತ್ರದಲ್ಲಿ ಒಳಗೊಂಡಿರುತ್ತದೆ. 
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇ 8ರಂದು ಶೂಟಿಂಗ್ ಆರಂಭವಾಗಲಿದ್ದು, ಚಿತ್ರಕ್ಕೆ ಭೂಮಿಪುತ್ರ ಎಂದು ಶೀರ್ಷಿಕೆ ಇಡಲಾಗಿದೆ. ಕುಮಾರಸ್ವಾಮಿ ಅವರ ಪಾತ್ರವನ್ನು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ವಹಿಸಲಿದ್ದಾರೆ.
ಚಿತ್ರಕ್ಕೆ ಕೆ.ಪ್ರಭು ಅವರು ಬಂಡವಾಳ ಹಾಕಿ ನಿರ್ಮಿಸುತ್ತಿದ್ದಾರೆ.
ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಸಾಮಾನ್ಯ ಜನರ ಕೈಗೂ ಅವರು ಸಿಗುತ್ತಿದ್ದರು. ನಿರ್ಮಾಪಕರು ಅವರ ಆಡಳಿತದ ಬಗ್ಗೆ ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ಹೇಳಿದರು. ನನಗೂ ಅದು ಇಷ್ಟವಾಗಿ ನಿರ್ದೇಶನ ಮಾಡಲು ಒಪ್ಪಿಕೊಂಡೆ ಎಂದು ಎಸ್.ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com