ಚಿತ್ರದ ಕಥೆ ಕೇಳಿದಾಗ ಖುಷಿಯಾಯಿತು. ಇದರಲ್ಲಿ ಡ್ರಾಮಾ, ಮನರಂಜನೆ ಇದೆ. ಈ ಪಾತ್ರಕ್ಕೆ ನಾನು ಸುಲಭವಾಗಿ ಹೊಂದಿಕೆಯಾಗಬಹುದು. ಬೇರೆ ಚಿತ್ರ ನಿರ್ಮಾಪಕರ ಜೊತೆಗೆ ಮಂಜುನಾಥ್ ಅವರ ಕೆಲಸದ ಶೈಲಿಯನ್ನು ನೋಡಿದ್ದೇನೆ. ಈ ಚಿತ್ರಕ್ಕೆ ಅವರು ನಿರ್ದೇಶಕರಾಗಿ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆಯಿದೆ ಎಂದು ದಿಗಂತ್ ಹೇಳಿದರು.