ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಮೆಹಬೂಬ್ ಸಾಬ್ ಪಿಂಜಾರ ಸಮಾಜದ ಶರೀಫ್ ಮತ್ತು ರಜೀಯಾ ಬೇಗಂ ದಂಪತಿ ಪುತ್ರ. 28 ವರ್ಷದ ಇವರಿಗೆ ಒಬ್ಬ ಸಹೋದರ, ಇಬ್ಬರು ಸಹೋದರಿ ಇದ್ದಾರೆ. ತಂದೆ ಕೂಲಿ ಕೆಲಸ ಮಾಡಿ ಕುಟುಂಬ ಸಲಹುತ್ತಿದ್ದಾರೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು ಖಚಿತ ಎನ್ನಲು ಇದೀಗ ಮೆಹಬೂಬ್ ಹೊಸ ಉದಾಹರಣೆ ಆಗಿದ್ದಾರೆ.