ನಿರ್ದೇಶಕ ಭರತ್ ಅವರ ಜೊತೆ ಕೆಲಸ ಮಾಡುವುದು ಒಂದು ವಿಶೇಷ ಅನುಭವ. ನನ್ನ ಕಡೆಯಿಂದ ನಾನು ಸಾಕಷ್ಟು ಪ್ರಾಮಾಣಿಕನಾಗಿದ್ದೇನೆ, ಸಿನಿಮಾವನ್ನು ಹೇಗೆ ಪ್ರಮೋಟ್ ಮಾಡಬೇಕು ಎಂಬುದರ ಬಗ್ಗೆ ನಾನು ಇನ್ನೂ ಕಲಿಯುತ್ತಿದ್ದೇನೆ. ಸಿನಿಮಾ ರಿಲೀಸ್ ಆಗಲು ವಿಳಂಭವಾಗಿದ್ದನ್ನು ಹೊರತು ಪಡಿಸಿದರೇ ನಾನು, ಚಿತ್ರೀಕರಣವನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ಸಿನಿಮಾ ರಿಲೀಸ್ ಆಗದಿರುವುದಕ್ಕೆ ಹಲವಾರು ಟೀಕೆಗಳು ಕೇಳಿ ಬಂದಿವೆ, ಆದರೆ ಅದಕ್ಕಾಗಿ ನಾನು ಸಾರಿ ಕೇಳುತ್ತೇನೆ, ಅವರ ಪ್ರತಿಕ್ರಿಯೆ ಬಗ್ಗೆ ನನಗೆ ಅರ್ಥವಾಗುತ್ತದೆ.ಏಕೆಂದರೆ ಮೊದಲು ರಣಧೀರ ದ ಬಗ್ಗೆ ಪ್ಲಾನ್ ಮಾಡಿದ್ದೆವು. ಆದರೆ ಅದರ ಶೂಟಿಂಗ್ ಆರಂಭವಾಗಲೇ ಇಲ್ಲ, ಹೀಗಾಗಿ ಸಾಹೇಬ ಸಿನಿಮಾ ಮುಂದಿನ ವಾರ ಬಿಡುಗಡೆಗೆ ಸಿದ್ಧವಾಗಿದೆ.