ಮುಂಗಾರು ಮಳೆಯಲ್ಲಿದ್ದಂತಹ ಅಭಿಮಾನಿಗಳಿಗೆ ಇಷ್ಟವಾದ ಮಾತು ಮುಗುಳು ನಗೆಯಲ್ಲಿ ಕೂಡ ಇದೆ. ಯೋಗರಾಜ್ ಭಟ್ ಮತ್ತು ನನ್ನ ನಡುವೆ ಸಾಮ್ಯತೆಯಿದೆ. ವರ್ಷಗಳು ಕಳೆದಂತೆ ಅವರು ಮಾಡುವ ಸಿನಿಮಾ, ಯೋಚಿಸುವ ರೀತಿ ಪಕ್ವವಾಗುತ್ತಾ ಹೋಗುತ್ತಿದೆ. ಅವರ ನಾಡಿಮಿಡಿತ ನನಗೆ ಅರ್ಥವಾಗಿದೆ, ನನ್ನದು ಅವರಿಗೆ ಅರ್ಥವಾಗಿದೆ. ಭಟ್ಟರ ಸಿನಿಮಾದಲ್ಲಿ ಸಂಭಾಷಣೆ ಅತ್ಯಂತ ಸಹಜವಾಗಿರುವುದರಿಂದ ಅವುಗಳನ್ನು ಹೇಳುವುದು ಸುಲಭ ಆದರೆ ಪಾತ್ರವನ್ನು ಅಭಿನಯಿಸುವುದು ಕಷ್ಟ ಎಂಬುದು ಗಣೇಶ್ ಅಭಿಪ್ರಾಯ.