ಹೊಸ ವರ್ಷಕ್ಕೆ ಕ್ರೇಜಿಸ್ಟಾರ್ ಪುತ್ರ ಮನೋರಂಜನ್ 'ಬೃಹಸ್ಪತಿ' ತೆರೆಗೆ

ಇದಾಗಲೇ 2017 ಮುಗಿಯುತ್ತಾ ಬಂದಿದ್ದು ಚಿತ್ರರಂಗವು 2018 ರ ನೂತನ ವರ್ಷ ಸ್ವಾಗತಕ್ಕೆ ತಯಾರಾಗಿದೆ.
ಬೃಹಸ್ಪತಿ,
ಬೃಹಸ್ಪತಿ,
ಬೆಂಗಳೂರು: ಇದಾಗಲೇ 2017 ಮುಗಿಯುತ್ತಾ ಬಂದಿದ್ದು ಚಿತ್ರರಂಗವು 2018 ರ ನೂತನ ವರ್ಷ ಸ್ವಾಗತಕ್ಕೆ ತಯಾರಾಗಿದೆ. ಈ ಸಂದರ್ಭದಲ್ಲಿ ಹೊಸ ವರ್ಷದ ಮೊದಲ ವಾರ 'ಬೃಹಸ್ಪತಿ' ತೆರೆಗೆ ಬರಲು ಸಿದ್ದನಾಗಿದ್ದಾನೆ. ಹೌದು, ಜನವರಿ 5ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಚಿತ್ರ 'ಬೃಹಸ್ಪತಿ' ಬಿಡುಗಡೆಯಾಗಲಿದೆ.
ರಾಕ್ ಲೈನ್ ಸಂಸ್ಥೆ ನಿರ್ಮಾಣ, ನಂದ ಕಿಶೋರ್ ನಿರ್ದೇಶನದ ಚಿತ್ರದ ಆಡಿಯೋ ಇದಾಗಲೇ ಬಿಡುಗಡೆಯಾಗಿದ್ದು ಸಾಕಷ್ಟು ಹಿಟ್ ಆಗಿದೆ. ಇದರೊಡನೆ ಮನೋರಂಜನ್ ಅವರ ಎರ್ಡನೇ ಚಿತ್ರದ ಬಗೆಗೆ ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿದೆ. ಮಾಸ್ ಲುಕ್ ನಲ್ಲಿ ನಟ ಹೇಗೆ ಕಾಣಿಸಲಿದ್ದಾರೆಂದು ನೋಡಲು ಪ್ರೇಕ್ಷಕರು ಕಾಯುತ್ತಲಿದ್ದಾರೆ.
ಮಿಶ್ತಿ ಚಕ್ರವರ್ತಿ ನಾಯಕಿ ಪಾತ್ರದಲ್ಲಿರುವ ಚಿತ್ರದಲ್ಲಿ ಸಿತಾರಾ, ಅವಿನಾಶ್, ತಾರಕ್ ಪೊನ್ನಪ್ಪ ಅವರ ಅಭಿನಯವಿದೆ. ಇನ್ನು 'ಬೃಹಸ್ಪತಿ' ಗೆ ವಿ.ಹರಿಕೃಷ್ಣ ಸಂಗೀತವಿದೆ, ಸತ್ಯ ಹೆಗಡೆ  ಅವರ ಛಾಯಾಗ್ರಹಣವೂ ಇದೆ.
ಇನ್ನು ಜನವರಿ ಐದರಂದು ತೆರೆ ಕಾಣುತ್ತಿರುವ ಇನ್ನೊಂದು ಚಿತ್ರ '3 ಗಂಟೆ, 30  ದಿನ 30  ಸೆಕೆಂಡ್'. ಜಿ.ಕೆ. ಮಧುಸೂಧನ್ ಇದಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಸಹ ಒಂದು ಪ್ರೇಮ ಕಥೆಯಾಗಿದ್ದು ರಿಯಾಲಿಟಿ ಶೋ ನಲ್ಲಿ ಭಾಗವಹಿಸುವ ನಾಯಕ ನಾಯಕಿಯರ ನಡುವೆ ಪ್ರೇಮ, ಪ್ರಣಯದ ಸಂದರ್ಭವನ್ನು ಚಿತ್ರಿಸುತ್ತದೆ. ಅನು ಗೌಡ, ಕಾವ್ಯಾ ಶೆಟ್ಟಿ, ದೇವರಾಜ್, ಸುಧಾರಾಣಿ ಸೇರಿ ಹಲವು ಪ್ರಮುಖರ ತಾರಾ ಬಳಗವೇ ಚಿತ್ರದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com