ಎ.ಪಿ ಅರ್ಜುನ್, ಚೇತನ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದರೆ ಮತ್ತೊಮ್ಮೆ ಇತಿಹಾಸ ನಿರ್ಮಿಸಬಹುದು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ಅಯೋಗ್ಯನ ಮೂಲಕ ನಿರ್ದೇಶಕನಾಗುತ್ತಿರುವ ಮಹೇಶ್ ಅವರೊಂದಿಗೂ ಧೃವ ಸರ್ಜಾ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸ್ಕ್ರಿಪ್ಟ್ ನ್ನು ಒಪ್ಪಿರುವ ಧೃವ ಸರ್ಜಾ, ಪೊಗರು ಚಿತ್ರದ ನಂತರ ಈ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು, ಶೀಘ್ರವೇ ಚಿತ್ರದ ಬಗ್ಗೆ ಮಾಹಿತಿ ಬಹಿರಂಗವಾಗಲಿದೆ. ಚಿತ್ರ ನಿರ್ಮಾಪಕರ ಪೈಕಿ ಉದಯ್ ಮೆಹ್ತಾ ಧೃವ ಸರ್ಜಾ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಧೃವ ಸರ್ಜಾ ತಮ್ಮ ಶೆಡ್ಯೂಲ್ ನ್ನು ನಿಗದಿಪಡಿಸುತ್ತಿದ್ದಾರೆ.