ಧನಂಜಯ್ ರಂಜನ್ ಮೈಸೂರು ಡೈರೀಸ್ ಮೂಲಕ ನಿರ್ದೇಶನ ಆರಂಭಿಸಲಿದ್ದಾರೆ. ಚಿತ್ರದ ಮೊದಲ ನೋಟವನ್ನು ಅವರು ಬಹಿರಂಗಪಡಿಸಿದ್ದಾರೆ. ಪ್ರಭು ಮುಂಡುಕೂರ್ ಮತ್ತು ಪಾವನ ಅವರು ಲಿಖಿತ್ ಮತ್ತು ಅಂಜನಾ ಎಂಬ ನಾಯಕ-ನಾಯಕಿ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.
ಸಾಮ್ರಾಟ್ ಎಂಟರ್ಟೈನರ್ಸ್ ನಡಿ ದೀಪಕ್ ಕೃಷ್ಣ ಚಿತ್ರಕ್ಕೆ ಬಂಡವಾಳ ಹಾಕಲಿದ್ದು ಮೈಸೂರಿನಲ್ಲಿ ಶೇಕಡಾ 8 ಭಾಗ ಹಾಗೂ ಉಳಿದ ಭಾಗ ಬೆಂಗಳೂರಿನಲ್ಲಿ ಚಿತ್ರೀಕರಣಗೊಳ್ಳಲಿದೆ. 55 ದಿನಗಳ ಮೂಲಕ ಚಿತ್ರೀಕರಣ ಮುಗಿದಿದೆ.
ಈ ಚಿತ್ರಕ್ಕೆ ಧನಂಜಯ್ ನಿರ್ದೇಶನ ಮಾಡಿದ್ದು ಮಾತ್ರವಲ್ಲದೆ ಚಿತ್ರಕಥೆ, ಸಂಭಾಷಣೆ ಮತ್ತು ನಟನೆ ಕೂಡ ಮಾಡಿದ್ದಾರೆ.
ಚಿತ್ರದ ಡಬ್ಬಿಂಗ್ ಜನವರಿ 4ರಿಂದ ಆರಂಭವಾಗಲಿದೆ. ಸಂಕ್ರಾಂತಿ ಹೊತ್ತಿಗೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಮೊದಲ ಬಾರಿಗೆ ಶಕ್ತಿ ಶೇಖರ್ ಅವರ ಛಾಯಾಗ್ರಹಣ ಮತ್ತು ಚರಣ್ ರಾಜ್ ಅವರ ಸಂಗೀತವಿದೆ.