ಬೆಂಗಳೂರು: ಚೊಚ್ಚಲ ಸಿನೆಮಾ '೧ಸ್ಟ್ ರ್ಯಾಂಕ್ ರಾಜು' ನಿರ್ದೇಶಿಸಿ ಗಮನ ಸೆಳೆದ ನಿರ್ದೇಶಕ ನರೇಶ್ ಕುಮಾರ್, ಈಗ ತಮ್ಮ ಎರಡನೇ ಸಿನೆಮಾಗೆ ಸಜ್ಜಾಗಿದ್ದಾರೆ. ಅವರಿಗೆ ಅದೃಷ್ಟ ತಂದಿದ್ದ ರಾಜು ಹೆಸರನ್ನು ಉಳಿಸಿಕೊಂಡಿದ್ದು, ನೂತನ ಸಿನೆಮಾಗೆ 'ರಾಜು ಕನ್ನಡ ಮೀಡಿಯಮ್' ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ '೧ಸ್ಟ್ ರ್ಯಾಂಕ್ ರಾಜು' ನಟ ಗುರುನಂದನ್ ಕೂಡ ಸದರಿ ಸಿನೆಮಾಗೆ ಹಿಂದಿರುಗಿದ್ದಾರೆ.