ಸಿನೆಮಾ ಕೈಬಿಡುವಂತೆ ಸಲ್ಮಾನ್ ಖಾನ್ ಗೆ ಅಜಯ್ ದೇವಗನ್ ಪತ್ರ?

'ಶಿವಾಯ್' ಸಿನೆಮಾದ ಪ್ರಚಾರದ ವೇಳೆಯಲ್ಲಿ ಅಜಯ್ ದೇವಗನ್ ತಮ್ಮ ನಿರ್ದೇಶನದ ಮುಂದಿನ ಚಿತ್ರ 'ಸನ್ಸ್ ಆಫ್ ಸರ್ದಾರ್' ಘೋಷಿಸಿದ್ದರು. ಸರಗರ್ಹಿಯ ಯುದ್ಧದ ಮೇಲಿನ ಈ ಚಿತ್ರವನ್ನು ಹಾಲಿವುಡ್ ಖ್ಯಾತಿಯ
ಅಜಯ್ ದೇವಗನ್-ಸಲ್ಮಾನ್ ಖಾನ್
ಅಜಯ್ ದೇವಗನ್-ಸಲ್ಮಾನ್ ಖಾನ್
Updated on
ಮುಂಬೈ: 'ಶಿವಾಯ್' ಸಿನೆಮಾದ ಪ್ರಚಾರದ ವೇಳೆಯಲ್ಲಿ ಅಜಯ್ ದೇವಗನ್ ತಮ್ಮ ನಿರ್ದೇಶನದ ಮುಂದಿನ ಚಿತ್ರ 'ಸನ್ಸ್ ಆಫ್ ಸರ್ದಾರ್' ಘೋಷಿಸಿದ್ದರು. ಸರಗರ್ಹಿಯ ಯುದ್ಧದ ಮೇಲಿನ ಈ ಚಿತ್ರವನ್ನು ಹಾಲಿವುಡ್ ಖ್ಯಾತಿಯ '೩೦೦' ಸಿನೆಮಾದ ಮಟ್ಟಕ್ಕೆ ಕೊಂಡುಯ್ಯುವುದಾಗಿಯೂ ತಿಳಿಸಿದ್ದರು. 
ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಒಂದಾಗಿ, ಇದೆ ವಿಷಯವಿರುವ ಸಿನೆಮಾವೊಂದನ್ನು ಅಕ್ಷಯ್ ಕುಮಾರ್ ನಟನೆಯಲ್ಲಿ ನಿರ್ಮಿಸುವುದಾಗಿ ಘೋಷಿಸಿದ ಮೇಲೆ ಅಜಯ್ ದೇವಗನ್ ಅವರಿಗೆ ನಂಬಲು ಸಾಧ್ಯವಾಗಿರಲಿಲ್ಲ. ಆದರೆ ಈ ಸುದ್ದಿ ನಿಜ ಎಂದು ಈದ ಮೇಲೆ ಅವರಿಗೆ ನಿರಾಸೆಯಾಗಿತ್ತು. 
ಈ ವಿಷಯವಾಗಿ ಸಲ್ಮಾನ್ ಖಾನ್ ಅವರಿಗೆ ಭಾವನಾತ್ಮಕ ಸಂದೇಶವನ್ನು ಅಜಯ್ ದೇವಗನ್ ಕಳುಹಿಸಿದ್ದಾರೆ ಎನ್ನಲಾಗಿದೆ. ತಮ್ಮ ಕುಟುಂಬದ ಸದಸ್ಯ ಎಂದೇ ಪರಿಗಣಿಸುವ ಸಲ್ಮಾನ್ ಅವರಿಗೆ, ಸಾದ್ಯವಾದರೆ ಈ ಸಿನೆಮಾ ಕೈಬಿಡುವಂತೆ ಕೋರಿದ್ದಾರಂತೆ. ಈಗಾಗಲೇ 'ಸನ್ಸ್ ಆಫ್ ಸರ್ದಾರ್' ಸಿನೆಮಾದ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದು, ಇದೆ ವಿಷಯವಾಗಿ ನೀವು ಕೂಡ ಸಿನೆಮಾ ತೆಗೆಯಲು ಮುಂದಾದರೆ ಅದು ಸರಿಯಲ್ಲಿ ಎಂದು ಕೂಡ ತಿಳಿಸಿದ್ದಾರಂತೆ. 
೧೯೯೯ ರ 'ಹಮ್ ದಿಲ್ ದೇ ಚುಕೆ ಸನಮ್' ಸಿನೆಮಾದಲ್ಲಿ ಒಟ್ಟಿಗೆ ನಟಿಸಿದ್ದಾಗಿಲಿಂದಲೂ ದೇವಗನ್ ಮತ್ತು ಸಲ್ಮಾನ್ ಅತ್ಯುತ್ತಮ ಗೆಳೆಯರು. ಈಗ ಈ ವಿವಾದವನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೋ ಎಂಬ ಕುತೂಹಲ ಸಿನೆರಸಿಕರಲ್ಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com