ನಿನ್ನೆಯ ದಿನಾಂಕದಲ್ಲಿ ಕಳುಹಿಸಿದ ನೊಟೀಸ್ ನಲ್ಲಿ ನಟ ಸೂರ್ಯ ಅವರ ವಕೀಲ ಆರ್ ವಿಜಯ್ ಆನಂದ್, ಸೂರ್ಯ ಅವರು ಜಲ್ಲಿಕಟ್ಟು ಪರ ತಮ್ಮ ಬೆಂಬಲವನ್ನು ಅನೇಕ ಸಮಯಗಳಿಂದ ನೀಡುತ್ತಾ ಬಂದಿದ್ದಾರೆ. ಅವರಿಗೆ ಅಗ್ಗದ ಪ್ರಚಾರ ಪಡೆಯುವ ಅಗತ್ಯವಿಲ್ಲ. ಅವರ ಮೇಲೆ ವೃಥಾ ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ ಭಾರತದ ಪೇಟಾ ಸಂಘಟನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ವ ಜೋಶಿಪುರ ಮತ್ತು ಮತ್ತಿಬ್ಬರು ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ ಎಂದರು.