ಅವರ ಕಾಮಿಡಿ ಷೋ ಕಾರ್ಯಕ್ರಮದಲ್ಲಿ 'ಮೇಲುಕೋಟೆ ಮಂಜ' ಸಿನೆಮಾದ ಆಡಿಯೋ ಬಿಡುಗಡೆ ಮಾಡಲು ಸಜ್ಜಾಗಿರುವ ನಟ, ತಾವು ಗೀತರಚನಕಾರರಾಗಿರುವುದಾಗಿಯೂ ತಿಳಿಸುತ್ತಾರೆ. 'ಕಣ್ಮುಚ್ಚಿ ನಡೆದಾಗ ಯಾಕಿಂಗೆ ಹೇಳು ಬಾ...' ಎಂಬ ಡ್ಯುಯೆಟ್ ಚಿತ್ರಗೀತೆಯನ್ನು ಜಗ್ಗೇಶ್ ಬರೆದಿದ್ದು "ನಾನು ಜಯಂತ್ ಕಾಯ್ಕಿಣಿ ಅವರ ಅತಿ ದೊಡ್ಡ ಅಭಿಮಾನಿ ಮತ್ತು ಅವರ ಕೆಲಸಗಳನ್ನು ಒಂದು ದಶಕದಿಂದಲೂ ಗಮನಿಸುತ್ತಾ ಬಂದಿದ್ದೇನೆ. ನನ್ನ ಈ ಸಿನೆಮಾಗೆ ಗೀತೆ ರಚಿಸಲು ಅವರೇ ಸ್ಫೂರ್ತಿ" ಎನ್ನುತ್ತಾರೆ ನಿರ್ದೇಶಕ-ನಟ.