ಪ್ರತಿ ಸಿನೆಮಾ ತಮಗೆ ಪ್ರಯೋಗವಿದ್ದಂತೆ ಎಂದು ತಿಳಿಸುವ ನಿರ್ದೇಶಕ, ಗತಿಸಿದ ಅತಿ ಹಿಂದಿನ ಯುಗವನ್ನು ಮರುಕಳಿಸುವುದು ಬಹಳ ತ್ರಾಸದಾಯಕ ಕೆಲಸ ಎನ್ನುತ್ತಾರೆ. "ಇತಿಹಾಸ ಆಧಾರಿತ ವಿಷಯವನ್ನು ಕೇವಲ ಸಂಶೋಧನೆಯಿಂದ ಮೂಡಿಸಲು ಸಾಧ್ಯವಾಗುವುದಿಲ್ಲ, ಅಂದಿನ ಕಾಲಘಟ್ಟವನ್ನು ಚಿತ್ರಿಸಬೇಕು. ಅಧೃಷ್ಟವಶಾತ್ ನನ್ನ ಜೊತೆಗೆ ಕಲಾ ನಿರ್ದೇಶಕ ಶಶಿಧರ್ ಅಡಪ, ವಸ್ತ್ರ ವಿನ್ಯಾಸಕಿ ನಾಗಿಣಿ ಭರಣ ಇದ್ದರು. ಅವರು ಎಲ್ಲವನ್ನು ಅಥೆಂಟಿಕ್ ಆಗಿ ಕಾಣಲು ಸಹಕರಿಸಿದ್ದಾರೆ. ಆದುದರಿಂದ ಕರ್ನಾಟಕದ ಸಂಸ್ಕೃತಿ ನಿಮಗೆ ಉತ್ತಮವಾಗಿ ಕಾಣಸಿಗಲಿದೆ" ಎನ್ನುತ್ತಾರೆ ನಾಗಾಭರಣ.