"ನನ್ನ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಸಹಕರಿಸಿದ ನಾಗಾಭರಣ ಅವರಿಗೆ ನಾನು ಆಭಾರಿಯಾಗಿದ್ದೇನೆ," ಎನ್ನುವ ಧನಂಜಯ್, ಅಲ್ಲಮನ ವಚನಗಳನ್ನು ಓದಿಕೊಂಡು, ಕೇಳಿಕೊಂಡು ಬೆಳೆದಿದ್ದಕ್ಕೆ ಈ ಪಾತ್ರವನ್ನು ನಿರ್ವಹಿಸುವುದು ಸುಲಭವಾಯಿತು ಎನ್ನುತ್ತಾರೆ. "ಕೆಲವು ನಾಟಕಗಳಲ್ಲಿ ನೋಡಿ ಅಲ್ಲಮನ ಬಗ್ಗೆ ಕೆಲವೊಂದು ಸಂಗತಿಗಳನ್ನು ಅರಿತಿದ್ದೆ" ಎಂದು ಕೂಡ ಅವರು ಹೇಳಿದ್ದಾರೆ.