ಚೆನ್ನೈ: ಹೊಸದಾಗಿ ಜಾರಿ ಮಾಡಿರುವ ತೆರಿಗೆ ನೀತಿ ಜಿ ಎಸ್ ಟಿಯಲ್ಲಿ ಮನರಂಜನಾ ತೆರಿಗೆಯನ್ನು ೩೦%ಗೆ ಏರಿಸಿರುವುದನ್ನು ವಿರೋಧಿಸಿ ತಮಿಳುನಾಡಿನ ಚಿತ್ರಮಂದಿರಗಳು ಬಂದ್ ಮಾಡುತ್ತಿರುವ ಹಿನ್ನಲೆಯಲ್ಲಿ, ತಮಿಳು ಚಿತ್ರರಂಗ ಒಗ್ಗೂಡಿದ ಧ್ವನಿಯಲ್ಲಿ ಮಾತನಾಡಲಿದೆ ಎಂದು ಸೋಮವಾರ ನಟ-ನಿರ್ದೇಶಕ ಕಮಲ್ ಹಾಸನ್ ಹೇಳಿದ್ದಾರೆ.