ಸಿನಿಮಾ ಕಥೆ ಯೂನಿವರ್ಸಲ್ ಆಗಿರುವುದರಿಂದ ರಿಮೇಕ್ ಮಾಡಲು ನಿರ್ಧರಿಸಿದೆ. ಈ ಕಥೆಯನ್ನು ಹಲವು ಭಾಷೆಗಳಲ್ಲಿ ಹೇಳಬಹುದಾಗಿದೆ. ರಾಜ್-ವಿಷ್ಣು ಇಬ್ಬರು ಭಾರತ ಬಿಟ್ಟು ವಿದೇಶಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದ ನಂತರ ಕುಟುಂಬದ ಮೌಲ್ಯಗಳನ್ನು ಮರೆಯುತ್ತಾರೆ, ಕಥೆ ಪ್ರಸ್ತುತ ದಿನಗಳಲ್ಲಿ ಎಲ್ಲರಿಗೂ ಅನ್ವಯವಾಗುವಂತಹದ್ದು, ಅದನ್ನು ರಾಜ್ -ವಿಷ್ಣು ಸಿನಿಮಾದಲ್ಲಿ ಉತ್ತಮವಾಗಿ ತೋರಿಸಲಾಗಿದೆ. ನಾಯಕ ಮತ್ತು ಅಜ್ಜನ ನಡುವಿನ ಸಂಬಂಧದ ನಡುವಿನ ಕಥೆಯಾಗಿದೆ ಎಂದು ಮಾದೇಶ್ ವಿವರಿಸಿದ್ದಾರೆ.