ಚೊಚ್ಚಲ ತೆಲುಗು ಸಿನೆಮಾದಲ್ಲಿ ಬುಲೆಟ್ ಓಡಿಸಿದ ಶ್ರದ್ಧಾ ಶ್ರೀನಾಥ್

ತಮ್ಮ ಚೊಚ್ಚಲ ತೆಲುಗು ಸಿನೆಮಾದ ಚಿತ್ರೀಕರಣದಲ್ಲಿ ಮೊದಲ ಬಾರಿಗೆ ದ್ವಿಚಕ್ರ ವಾಹನ ಓಡಿಸಿರುವ ನಟಿ ಶ್ರದ್ಧಾ ಶ್ರೀನಾಥ್, ಇದು ನೆನಪಿನಲ್ಲಿ ಉಳಿಯುವ ಅನುಭವವಾಗಿತ್ತು ಎನ್ನುತ್ತಾರೆ.
ನಟಿ ಶ್ರದ್ಧಾ ಶ್ರೀನಾಥ್
ನಟಿ ಶ್ರದ್ಧಾ ಶ್ರೀನಾಥ್
ಬೆಂಗಳೂರು: ತಮ್ಮ ಚೊಚ್ಚಲ ತೆಲುಗು ಸಿನೆಮಾದ ಚಿತ್ರೀಕರಣದಲ್ಲಿ ಮೊದಲ ಬಾರಿಗೆ ದ್ವಿಚಕ್ರ ವಾಹನ ಓಡಿಸಿರುವ ನಟಿ ಶ್ರದ್ಧಾ ಶ್ರೀನಾಥ್, ಇದು ನೆನಪಿನಲ್ಲಿ ಉಳಿಯುವ ಅನುಭವವಾಗಿತ್ತು ಎನ್ನುತ್ತಾರೆ. 
ರವಿಕಾಂತ್ ಪೆರೆಪು ನಿರ್ದೇಶನದ 'ಹೇ ಕೃಷ್ಣ ಮುಕುಂದ ಮುರಾರಿ' ಸಿನೆಮಾದಲ್ಲಿ ನಟಿ ರಾಯಲ್ ಎನ್ಫೀಲ್ಡ್ ಓಡಿಸಿದ್ದಾರಂತೆ. ಈ ಸಿನೆಮಾದಲ್ಲಿ ಶ್ರದ್ಧಾ ಸಿಂಧು ಜೊನ್ನಲಗಡ್ದ ಎದುರು ನಟಿಸಿದ್ದಾರೆ. ಈ ವಾರ ಬೆಂಗಳೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. "ಇದೆ ಮೊದಲ ಬಾರಿಗೆ ನಾನು ಬೈಕ್ ಓಡಿಸಿದ್ದು. ಅದು ನಂದಿ ಬೆಟ್ಟದ ಮೇಲಕ್ಕೆ. ಮಳೆ ಬಿದ್ದು ರಸ್ತೆ ಜಾರುತ್ತಿತ್ತಾದ್ದರಿಂದ ನಾನು ಮೂರು ಸಲ ಕೆಳಗೆ ಬಿದ್ದೆ. ಆದರೆ ಅದು ನಿಜವಾಗಿಯೂ ರೋಚಕವಾಗಿತ್ತು" ಎನ್ನುವ ನಟಿ "ಬೈಕ್ ಓಡಿಸುವ ನನ್ನ ಆಸೆ ಈ ಸಿನೆಮಾದಿಂದ ನೆರವೇರಿತು" ಎಂದಿದ್ದಾರೆ. 
ಈಮಧ್ಯೆ ತಮ್ಮ ತಮಿಳು ಸಿನೆಮಾ 'ವಿಕ್ರಂ ವೇಧ' ಬಿಡುಗಡೆಗೆ ಕಾಯುತ್ತಿರುವ ಶ್ರದ್ಧಾ ಈಗ ಎರಡನೇ ತೆಲುಗು ಸಿನೆಮಾಗೂ ಸಹಿ ಹಾಕಿದ್ದಾರೆ. ಇನ್ನು ಹೆಸರಿಡದ ಈ ಸಿನೆಮಾಗೆ ಶುಕ್ರವಾರ ಮುಹೂರ್ತ ನೆರವೇರಿದೆ. ಇದರಲ್ಲಿ ಸಾಯಿಕುಮಾರ್ ಪುತ್ರ ಆದಿ ಎದುರು ಶ್ರದ್ಧಾ ನಟಿಸಲಿದ್ದಾರೆ. ಇದರ ಬಗ್ಗೆ ಹೆಚ್ಚು ವಿವರಗಳು ತಿಳಿದಿಲ್ಲ ಆದರೆ ಈ ರೊಮ್ಯಾಂಟಿಕ್ ಹಾಸ್ಯ ಚಿತ್ರವನ್ನು ವಿಶ್ವನಾಥ್ ಅರಿಗೆಲ ನಿರ್ದೇಶಿಸುತ್ತಿದ್ದು, ಎ ಆರ್ ರಹಮಾನ್ ಸಂಗೀತ ನೀಡಲಿದ್ದಾರೆ ಎನ್ನಲಾಗಿದೆ. 
ಇನ್ನು ಕನ್ನಡ ಚಿತ್ರರಂಗದಲ್ಲಿ 'ಆಪರೇಷನ್ ಅಲಮೇಲಮ್ಮ' ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದ್ದು, ಜುಲೈ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com