ಬೆಂಗಳೂರು: ಶ್ರೀನಿವಾಸ ರಾಜು ನಿರ್ದೇಶನದ 'ದಂಡುಪಾಳ್ಯ' ಸಿನೆಮಾದ ಎರಡನೇ ಭಾಗವನ್ನು ಈಗ '೨' ಎಂದು ಹೆಸರಿಸಲಾಗಿದ್ದು, ಅದಕ್ಕೆ ಸೆನ್ಸಾರ್ ಪ್ರಮಾಣಪತ್ರ ದೊರಕಿದೆ. ಇದಕ್ಕೆ 'ಎ' ಪ್ರಮಾಣ ಪತ್ರ ನೀಡಿರುವ ಸೆನ್ಸಾರ್ ಮಂಡಳಿ ಅಧಿಕಾರಿಗಳು ನಿರ್ದೇಶಕರಿಗೆ ಒದಗಬಲ್ಲ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರಂತೆ ಕೂಡ.