ಬೆಂಗಳೂರು: ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನಕ 'ತಾರಕಾಸುರ' ಸಿನೆಮಾಗೆ ನಾಯಕನಟಿಯ ಆಯ್ಕೆ ಅಂತಿಮವಾಗಿದೆ. 'ಕೆಂಡಸಂಪಿಗೆ' ನಟಿ ಮಾನ್ವಿತಾ ಹರೀಶ್ ನಾಯಕ ನಟ ವೈಭವ್ ಎದುರು ಮೊದಲ ಬಾರಿಗೆ ನಟಿಸಲಿದ್ದಾರೆ.
ಈಗ ನಿರ್ಮಾಣ ಸಂಸ್ಥೆ ಮತ್ತು ನಾಯಕನಟಿಯ ನಡುವೆ ಅಧಿಕೃತ ಒಪ್ಪಂದ ಆಗಿದ್ದು, ಶೀಘ್ರದಲ್ಲಿಯೇ ಘೋಷಣೆಯಾಗಲಿದೆ ಎನ್ನುತ್ತವೆ ಮೂಲಗಳು.
ಈ ಸುದ್ದಿಯನ್ನು ಧೃಢೀಕರಿಸಿರುವ ನಿರ್ದೇಶಕ ಬಂಡಿಯಪ್ಪ "ಮಾನ್ವಿತಾ ಜೂನ್ ೨೫ ರಂದು 'ತಾರಕಾಸುರ' ಸೆಟ್ ಸೇರಲಿದ್ದಾರೆ" ಎಂದಿದ್ದಾರೆ.
ನಟಿಗೆ ಈ ಸಿನೆಮಾದ ಪಾತ್ರದಲ್ಲಿ ಎರಡು ಛಾಯೆಗಳು ಇರಲಿವೆಯಂತೆ. "ಮಾನ್ವಿತಾ ತಂಡ ಸೇರಿದ ಮೇಲೆ ಹೆಚ್ಚಿನ ವಿವರಗಳನ್ನು ತಿಳಿಸಲಿದ್ದೇವೆ" ಎನ್ನುತ್ತಾರೆ ನಿರ್ದೇಶಕ.
ನರಸಿಂಹಲು ನಿರ್ಮಿಸುತ್ತಿರುವ ಈ ಸಿನೆಮಾಗೆ ಧರ್ಮ ವಿಶ್ ಸಂಗೀತ ನೀಡುತ್ತಿದ್ದು, ಕುಮಾರ್ ಗೌಡ ಅವರ ಛಾಯಾಗ್ರಹಣ ಇದೆ.