ರಜನೀಕಾಂತ್-ಧನುಷ್
ರಜನೀಕಾಂತ್-ಧನುಷ್

ರಜನಿಕಾಂತ್ ರಾಜಕೀಯ ಪ್ರವೇಶದ ಮೇಲಿನ ಪ್ರಶ್ನೆಗೆ ಧನುಷ್ ತಿರುಗುಬಾಣ

'ವಿಐಪಿ-೨' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ-ನಿರ್ದೇಶಕ ಧನುಷ್, ಮಾವ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿ,
Published on
ಮುಂಬೈ: 'ವಿಐಪಿ-೨' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ-ನಿರ್ದೇಶಕ ಧನುಷ್, ಮಾವ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿ, ನನ್ನ ಅಭಿಪ್ರಾಯವನ್ನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ. 
ರಜನಿಕಾಂತ್ ರಾಜಕೀಯಕ್ಕೆ ಸೇರಬೇಕೇ ಎಂಬ ಪ್ರಶ್ನೆಗೆ, ವರದಿಗಾರರಿಗೆ ಉತ್ತರಿಸಿರುವ ಧನುಷ್ "ನಿಮ್ಮ ಬಳಿ ಅಭಿಪ್ರಾಯ ಇದೆಯೇ? ಯಾಕಿರಬಾರದು? ನನಗೆ ನನ್ನದೇ ಅಭಿಪ್ರಾಯ ಇದೆ ಮತ್ತು ಅದನ್ನು ನನ್ನ ಬಳಿಯೇ ಉಳಿಸಿಕೊಳ್ಳುತ್ತೇನೆ" ಎಂದಿದ್ದಾರೆ. 
ಕಳೆದ ಕೆಲವು ವಾರಗಳಿಂದ ರಾಜಕೀಯ ಪ್ರವೇಶ ಮಾಡುವ ಸುಳಿವನ್ನು ರಜನೀಕಾಂತ್ ನೀಡುತ್ತಲೇ ಬಂದಿದ್ದಾರೆ. 
ಕಳೆದ ತಿಂಗಳು ಕೂಡ "ದೇವರು ಇಚ್ಛಿಸಿದರೆ" ರಾಜಕೀಯದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದಾಗಿ ರಜನೀಕಾಂತ್ ಹೇಳಿದ್ದರು. ಸದ್ಯಕ್ಕೆ ರಜನೀಕಾಂತ್ 'ಕಾಲಾ' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶಂಕರ್ ಅವರ '೨.೦' ಸಿನೆಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com