ಬೆಂಗಳೂರು: 'ನಮ್ ಏರಿಯಾದಲ್ಲಿ ಒಂದಿನ', 'ತುಘಲಕ್' ಸಿನೆಮಾಗಳ ನಂತರ ವಿರಾಮ ತೆಗೆದುಕೊಂಡಿದ್ದ ನಿರ್ದೇಶಕ ಅರವಿಂದ್ ಕೌಶಿಕ್ ಈಗ 'ಹುಲಿರಾಯ'ನ ಮೂಲಕ ಹಿಂದಿರುಗಿದ್ದಾರೆ.
ನೆನಪಿನಲ್ಲುಳಿಯುವ ಸಿನೆಮಾ ಮಾಡಿದ್ದೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುವ ಅರವಿಂದ್ "ನನ್ನ ಕಥೆ ಹಿಡಿದು ಎಲ್ಲ ನಿರ್ಮಾಪಕರಿಗೂ ಒಪ್ಪಿಸುವ ಬದಲು, ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ. ಇದಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆ ನನಗೆ ನಿರ್ಮಾಪಕನನ್ನು ದೊರಕಿಸಿಕೊಟ್ಟಿತು ಮತ್ತು ಅವರು ನನ್ನ ಗೆಳೆಯ ಕೂಡ" ಎನ್ನುತ್ತಾರೆ.
"ಈ ಸಿನೆಮಾ ಕೇಂದ್ರದಲ್ಲಿ ಮನರಂಜನೆಯಿಂದ ಕೂಡಿರುವಂತಾದ್ದು. ನನ್ನ ಗೆಳೆಯನ ಜೊತೆಗೆ ಕಾಡಿಗೆ ಹೋದಾಗ ಈ ಕಥೆ ಹೊಳೆದದ್ದು. ಹುಲಿಯ ಕಥೆ ಮೂಲಕ ನನ್ನ ಕಥೆ ಹೇಳುವುದು ಸುಲಭ ಎಂದೆನಿಸಿತು. ಆದರೆ ನನ್ನ ಸಿನೆಮಾದಲ್ಲಿ ಹುಲಿ ಎಲ್ಲಿಯೂ ಬರುವುದಿಲ್ಲ" ಎನ್ನುತ್ತಾರೆ ಅರವಿಂದ್.
"ಈ ಸಿನೆಮಾದಲ್ಲಿ ಪ್ರೇಮಕಥೆಯಿದೆ, ಭಾವನಾತ್ಮಕ ಪಯಣ ಇದೆ, ಆಕ್ಷನ್ ಇದೆ ಮತ್ತು ಥ್ರಿಲ್ಲರ್ ಇದೆ" ಎನ್ನುತ್ತಾರೆ.
ಸಿನೆಮಾದಲ್ಲಿ ಬಾಲು ನಾಗೇಂದ್ರ, ದಿವ್ಯ, ಚಿರಶ್ರೀ ಮುಂತಾದವರು ನಟಿಸಿದ್ದು ಆಗಸ್ಟ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅರ್ಜುನ್ ರಾಮು ಸಂಗೀತ ನೀಡಿರುವ ಈ ಸಿನೆಮಾವನ್ನು ಪುಷ್ಕರ್ ಫಿಲಂಸ್ ವಿತರಣೆ ಮಾಡುವ ಸಾಧ್ಯತೆ ಇದೆ.