ಶ್ರದ್ಧ ಶ್ರೀನಾಥ್ ನಾಯಕನಟಿಯಾಗಿರುವ ಈ ಸಿನೆಮಾದಲ್ಲಿ, ನಿರ್ದೇಶಕ ಪವನ್ ಒಡೆಯರ್ ಹೀರೊ ಆಗಿ ನಟಿಸುತ್ತಿರುವುದು ವಿಶೇಷ. ಪವನ್ ಈ ಹಿಂದೆ 'ಬಹುಪರಾಕ್' ನಲ್ಲಿ ಅತಿಥಿ ನಟರಾಗಿದ್ದರು. ೨೦೧೪ ರಲ್ಲಿ ಬಿಡುಗಡೆಯಾದ 'ಪ್ರೀತಿ ಗೀತಿ ಇತ್ಯಾದಿ'ಯಲ್ಲಿ ನಾಯಕನಟನಾಗಿ ಅಭಿನಯಿಸಿದ್ದರು. ನಾನು ನಟನಾಗಲೆಂದೇ ಚಿತ್ರರಂಗಕ್ಕೆ ಬಂದವನು ಎಂದು ತಿಳಿಸುವ ಪವನ್ "ಈಗ 'ಶಾದಿ ಭಾಗ್ಯ'ದಲ್ಲಿ ಮತ್ತೆ ನಟಿಸಲಿದ್ದೇನೆ" ಎನ್ನುತ್ತಾರೆ.