ಪವನ್ ಒಡೆಯರ್ ಗೆ 'ಶಾದಿ ಭಾಗ್ಯ'; ಶ್ರೀನರಸಿಂಹ ನಿರ್ದೇಶನ

ತೆಲುಗು ಹಿಟ್ ಸಿನೆಮಾ 'ಪೆಳ್ಳಿ ಚೊಪ್ಪುಲು' ಕನ್ನಡಕ್ಕೆ 'ಶಾದಿ ಭಾಗ್ಯ'ವಾಗಿ ಬರಲು ಸಿದ್ಧವಾಗಿದೆ. ಈ ವಾರ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳಾಗಿವೆ.
ನಟ-ನಿರ್ದೇಶಕ ಪವನ್ ಒಡೆಯರ್
ನಟ-ನಿರ್ದೇಶಕ ಪವನ್ ಒಡೆಯರ್
ಬೆಂಗಳೂರು: ತೆಲುಗು ಹಿಟ್ ಸಿನೆಮಾ 'ಪೆಳ್ಳಿ ಚೊಪ್ಪುಲು' ಕನ್ನಡಕ್ಕೆ 'ಶಾದಿ ಭಾಗ್ಯ'ವಾಗಿ ಬರಲು ಸಿದ್ಧವಾಗಿದೆ. ಈ ವಾರ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳಾಗಿವೆ. 
ಈ ಮೊದಲು ಘೋಷಿಸಿದ್ದಂತೆ ನೃತ್ಯನಿರ್ದೇಶನದಿಂದ ನಿರ್ದೇಶನಕ್ಕೆ ಇಳಿದಿರುವ ಮುರಳಿ ಮಾಸ್ಟರ್ ಈ ಸಿನೆಮಾವನ್ನು ನಿರ್ದೇಶಿಸಬೇಕಿತ್ತು. ಆದರೆ ಸಮಯದ ಕಲಹದಿಂದ ಅವರು ಹಿಂದೆ ಸರಿದಿದ್ದಾರಂತೆ. ಈಗ ನಿರ್ದೇಶಕರ ಖುರ್ಚಿಯನ್ನು ಅಲಂಕರಿಸಿರುವವರು ಶ್ರೀನರಸಿಂಹ. 'ಶಾದಿ ಭಾಗ್ಯ'ದ ಮೂಲಕ ಅವರು ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. 
ಪವನ್ ಒಡೆಯರ್ ಅವರಿಗೆ ಸಹಾಯಕನಾಗಿ ಕೆಲಸ ಮಾಡಿರುವ ಈ ಚೊಚ್ಚಲ ನಿರ್ದೇಶಕ ರಮೇಶ್ ಅರವಿಂದ್ ಅವರ 'ಪುಷ್ಪಕ ವಿಮಾನ' ಸಿನೆಮಾದಲ್ಲಿ ಕೂಡ ದುಡಿದ ಅನುಭವ ಹೊಂದಿರುವವರು. ಈಗ ಸ್ವತಂತ್ರ ನಿರ್ದೇಶಕನಾಗಿ ಹೊರಮೊಮ್ಮಲು ಉತ್ಸುಕರಾಗಿದ್ದಾರೆ. 
ಈ ಸುದ್ದಿಯನ್ನು ಧೃಢೀಕರಿಸುವ ನಿರ್ಮಾಪಕ ಹರ್ಷ ಖಾಸನೀಸ್ "ಮುರಳಿ ಮಾಸ್ಟರ್ ಅವರ ಪೂರ್ವನಿಯೋಜಿತ ಕಾರ್ಯಕ್ರಮಗಳಿಂದ ಈ ಸಿನೆಮಾ ನಿರ್ದೇಶಿಸಲು ಸಾಧ್ಯವಾಗುತ್ತಿಲ್ಲ ಆದುದರಿಂದ ನಾವು ನರಸಿಂಹ ಅವರನ್ನು ಕರೆತಂದಿದ್ದೇವೆ" ಎನ್ನುತ್ತಾರೆ. 
ಶ್ರದ್ಧ ಶ್ರೀನಾಥ್ ನಾಯಕನಟಿಯಾಗಿರುವ ಈ ಸಿನೆಮಾದಲ್ಲಿ, ನಿರ್ದೇಶಕ ಪವನ್ ಒಡೆಯರ್ ಹೀರೊ ಆಗಿ ನಟಿಸುತ್ತಿರುವುದು ವಿಶೇಷ. ಪವನ್ ಈ ಹಿಂದೆ 'ಬಹುಪರಾಕ್' ನಲ್ಲಿ ಅತಿಥಿ ನಟರಾಗಿದ್ದರು. ೨೦೧೪ ರಲ್ಲಿ ಬಿಡುಗಡೆಯಾದ 'ಪ್ರೀತಿ ಗೀತಿ ಇತ್ಯಾದಿ'ಯಲ್ಲಿ ನಾಯಕನಟನಾಗಿ ಅಭಿನಯಿಸಿದ್ದರು. ನಾನು ನಟನಾಗಲೆಂದೇ ಚಿತ್ರರಂಗಕ್ಕೆ ಬಂದವನು ಎಂದು ತಿಳಿಸುವ ಪವನ್ "ಈಗ 'ಶಾದಿ ಭಾಗ್ಯ'ದಲ್ಲಿ ಮತ್ತೆ ನಟಿಸಲಿದ್ದೇನೆ" ಎನ್ನುತ್ತಾರೆ. 
ಈ ಪಾತ್ರಕ್ಕಾಗಿ ೧೫ ಕೆಜಿ ತೂಕ ಕಳೆದುಕೊಂಡಿರುವುದಾಗಿಯೂ ತಿಳಿಸುತ್ತಾರೆ ನಟ-ನಿರ್ದೇಶಕ ಪವನ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com