ಇದು ನಿಮ್ಮ ಕೊನೆಯ ಸಿನೆಮಾ ಆಗಲಿದೆಯೇ ಎಂಬ ಪ್ರಶ್ನೆಗೆ "ಮದುವೆಯ ನಂತರ ಕೆಲ ದಿನಗಳವರೆಗೆ ವಿರಾಮ ತೆಗೆದುಕೊಳ್ಳಬಹುದು. ಅದು ಮೇನಲ್ಲಿ ಆದರೆ ಸಿನೆಮಾಗಳಿಗೆ ವಿದಾಯ ಹೇಳುವ ಯಾವುದೇ ಚಿಂತನೆಗಳಿಲ್ಲ. ನಾನು ೨೦೦೭ ರಲ್ಲಿ 'ಚೆಲುವಿನ ಚಿತ್ತಾರ'ದಲ್ಲಿ ನಾಯಕನಟಿಯಾಗಿ ಅಭಿನಯಿಸಿದೆ. ಚಿತ್ರರಂಗದಲ್ಲಿ ೧೦ ವರ್ಷಕ್ಕೂ ಹೆಚ್ಚು ಕಳೆದಿದ್ದೇನೆ. ಅದನ್ನು ಹಿಂದಕ್ಕೆ ಬಿಡುವುದು ಅಷ್ಟು ಸುಲಭವಲ್ಲ. ಇಲ್ಲಿಯವರೆಗೂ ಒಳ್ಳೆಯ ವಿಷಯವುಳ್ಳ ಸಿನೆಮಾಗಳಲ್ಲಿ ಕೆಲಸ ಮಾಡಿದ್ದೇನೆ, ಮದುವೆಯ ನಂತರವೂ ಅದು ಮುಂದುವರೆಯುತ್ತದೆ" ಎನ್ನುತ್ತಾರೆ ಅಮೂಲ್ಯ. "ಜಗದೀಶ್ ಅವರ ಕುಟುಂಬ ನನ್ನ ಮೇಲೆ ಯ್ಯಾವುದೇ ನಿರ್ಬಂಧ ಹಾಕಿಲ್ಲ" ಎಂದು ಕೂಡ ಅವರು ತಿಳಿಸುತ್ತಾರೆ.