ಭೂಗತಲೋಕದ ಬಗೆಗಿನ ಜೀವನವನ್ನು ತೆರೆಯ ಮೇಲೆ ಕಾಣುವ ಕುತೂಹಲ ಎಂದಿಗೂ ಜೀವಂತವಾಗಿರುವುದೇ. ಕಲಾವಿದನಾಗಲು ಕಷ್ಟಪಟ್ಟಿದ್ದು, ಸಂಕೀರ್ಣ ಪಾತ್ರಗಳನ್ನೂ ಸರಳವಾಗಿ ನಟಿಸಲು ಪ್ರಯತ್ನಿಸುತ್ತೇನೆ ಎನ್ನುವ ನಟ ಆದಿತ್ಯ "ನಾನು 'ಬೆಂಗಳೂರು ಅಂಡರ್ ವರ್ಲ್ಡ್'ನಲ್ಲಿ ನಟಿಸಲು ಸ್ವಲ್ಪ ಸಮಯ ತೆಗೆದುಕೊಂಡೆ, ಏಕೆಂದರೆ ಒಪ್ಪಿಗೆಯಾದ ಸಿನೆಮಾದಲ್ಲಿ ನಟಿಸಲು ನನಗೆ ಇಷ್ಟವಿಲ್ಲ. ಆದುದರಿಂದ ನನ್ನ ಮೊದಲ ಆದ್ಯತೆ ಸ್ಕ್ರಿಪ್ಟ್ ಮತ್ತು ನಿರ್ದೇಶಕ" ಎನ್ನುವ ನಟ ನಿರ್ದೇಶಕ ಪಿ ಎನ್ ಸತ್ಯ ಅವರೊಂದಿಗಿನ ಸಂಬಂಧ ನಿರ್ಧಾರ ಮಾಡುವುದಕ್ಕೆ ಸಹಕರಿಸಿತು ಎನ್ನುತ್ತಾರೆ. "ಈ ಹಿಂದೆ ಅವರ ಜೊತೆಗೆ ಕೆಲಸ ಮಾಡುವ ಎರಡು ಅವಕಾಶಗಳು ಒದಗಿಬಂದಿದ್ದವು. ಆದರೆ ಅವುಗಳು ತಪ್ಪಿಹೋದವು. ಈಗ 'ಬೆಂಗಳೂರು ಅಂಡರ್ ವರ್ಲ್ಡ್'ಗೆ ಒಂದಾಗಿರುವುದಕ್ಕೆ ಸಂತಸವಾಗಿದೆ. ಅವರು ನನ್ನ ಪಾತ್ರವನ್ನು ಚೆನ್ನಾಗಿ ಚಿತ್ರಿಸಿದ್ದಾರೆ ಮತ್ತು ನಿರೂಪಣೆ ಶೈಲಿಯಲ್ಲಿ ಅದು ವಿಶಿಷ್ಟವಾಗಿ ಮೂಡಿಬಂದಿದೆ" ಎನ್ನುತ್ತಾರೆ.