ಮಾನ್ವಿತಾಗೆ ಸಿನೆಮಾಗಳ ಸುರಿಮಳೆ

ಕೆಂಡಸಂಪಿಗೆ ಹುಡುಗಿಗೆ ವರ್ಷ ೨೦೧೭ ಫಲಪ್ರದವಾಗಿತ್ತು. ಸೂರಿಯವರ 'ಟಗರು' ಸಿನೆಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ಮಾನ್ವಿತಾ ಈಗ ನವೀನ್ ರೆಡ್ಡಿ ನಿರ್ದೇಶನದ 'ರಿಲ್ಯಾಕ್ಸ್ ಸತ್ಯ'
ನಟಿ ಮಾನ್ವಿತಾ
ನಟಿ ಮಾನ್ವಿತಾ
ಬೆಂಗಳೂರು: ಕೆಂಡಸಂಪಿಗೆ ಹುಡುಗಿಗೆ ವರ್ಷ ೨೦೧೭ ಫಲಪ್ರದವಾಗಿತ್ತು. ಸೂರಿಯವರ 'ಟಗರು' ಸಿನೆಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ಮಾನ್ವಿತಾ ಹರೀಶ್ ಈಗ ನವೀನ್ ರೆಡ್ಡಿ ನಿರ್ದೇಶನದ 'ರಿಲ್ಯಾಕ್ಸ್ ಸತ್ಯ' ಸಿನೆಮಾದಲ್ಲಿ ಕೂಡ ನಟಿಸುತ್ತಿದ್ದು ಮತ್ತೊಂದು ದೊಡ್ಡ ಯೋಜನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. 
ಆರ್ ಚಂದ್ರು ಅವರ 'ಕನಕ' ಸಿನೆಮಾಗೆ ಮಾನ್ವಿತಾ ಆಯ್ಕೆಯಾಗಿದ್ದಾರೆ. ಇದರಲ್ಲಿ ಅವರು ದುನಿಯಾ ವಿಜಯ್ ಎದುರು ನಟಿಸಲಿದ್ದಾರೆ. ಇದನ್ನು ಧೃಢೀಕರಿಸುವ ನಟಿ "ವಿಜಯ್ ಅವರಿಗೆ ಒರಟ ಮತ್ತು ಮುಗ್ಧತೆಯ ನೋಟವಿದೆ. ಇದು ಎಲ್ಲಾ ಹಿರೊಗಳಿಗೂ ಇರುವುದಿಲ್ಲ. ಅಲ್ಲದೆ ನನಗೆ ಸತ್ಯ ಹೆಗಡೆ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಅವರನ್ನು ಕನ್ನಡ ಚಿತ್ರರಂಗದ ಅತ್ಯದ್ಭುತ ಸಿನೆಮ್ಯಾಟೋಗ್ರಾಫರ್ ಗಳಲ್ಲಿ ಒಬ್ಬರು ಎಂದು ನಂಬುತ್ತೇನೆ. 'ಕೆಂಡಸಂಪಿಗೆ' ಯಸ್ಸಿಗೆ ಅವರು ಕೂಡ ಒಬ್ಬ ಕಾರಣಕರ್ತರು" ಎನ್ನುತ್ತಾರೆ ನಟಿ. 
ಒಬ್ಬ ನಾಯಕನಟಿಯನ್ನು ಅಂತಿಮಗೊಳಿಸಿರುವ ನಿರ್ದೇಶಕ ಚಂದ್ರು ಈಗ 'ಕನಕ' ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಮೊದಲಾರ್ಧ ಚಿತ್ರೀಕರಣ ಸಂಪೂರ್ಣಗೊಂಡ ಮೇಲೆ ಮತ್ತೊಬ್ಬ ಹೀರೋಯಿನ್ ಹೆಸರನ್ನು ನಿರ್ದೇಶಕ ಧೃಢೀಕರಿಸಲಿದ್ದಾರಂತೆ.  
'ಕನಕ'ದಲ್ಲಿ ವಿಜಯ್ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನವೀನ್ ಸಜ್ಜು ಸಂಗೀತ ನೀಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com