ಮಹಿಳೆ ಕಿಡ್ನಾಪ್ ಪ್ರಕರಣ: ಪ್ರೀತಿ ಮಾಯೆ ಹುಷಾರು ಸಿನಿಮಾ ನಿರ್ಮಾಪಕನಿಗೆ ಜಾಮೀನು

ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ವಂಚಿಸಿ, ನಂತರ ಆಕೆಯನ್ನು ಅಪಹರಿಸಿದ್ದ ನಿರ್ಮಾಪಕ ವೀರೇಶ್‌ ಎಂಬುವರಿಗೆ ಜಾಮೀನು...
ವೀರೇಶ್
ವೀರೇಶ್
Updated on

ಬೆಂಗಳೂರು: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ವಂಚಿಸಿ, ನಂತರ ಆಕೆಯನ್ನು ಅಪಹರಿಸಿದ್ದ ನಿರ್ಮಾಪಕ  ವೀರೇಶ್‌ ಎಂಬುವರಿಗೆ ಜಾಮೀನು ಸಿಕ್ಕಿದೆ.

ಪರಪ್ಪನ ಅಗ್ರಹಾರ ನಿವಾಸಿಯಾದ ವಿರೇಶ್ ವಿರುದ್ಧ ಮಾರ್ಚ್ 1ರಂದು ಮಹಿಳೆ ಕಿಡ್ಮಾಪ್ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ವಿರೇಶ್ ಒಡೆತನದ ಎ1 ಕಂಪನಿಯಲ್ಲಿ ಸ್ವಾಗತಾರ್ಹಿಣಿಯಾಗಿ ಕಳೆದ 4 ವರ್ಷದಿಂದ ಕೆಲಸ ಮಾಡುತ್ತಿದ್ದಳು.

ಹೊಸ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನ ಎಂದು ವಿರೇಶ್ ನಂಬಿಸಿದ್ದರು. ಆದರೆ ಎಷ್ಟು ದಿನ ಕಳೆದರೂ ವಿರೇಶ್ ಆಕೆಗೆ ನೀಡಿದ್ದ ಭರವಸೆ ಈಡೇರಿಲ್ಲಿಲ್ಲ. ಹೀಗಾಗಿ ಆಕೆ ಕಳೆದು ಮೂರು ತಿಂಗಳಿಂದ ಕೆಲಸಕ್ಕೆ ಹೋಗಿರಲಿಲ್ಲ.

ಮಾರ್ಚ್ 1 ರಂದು ಆಖೆ ತನ್ನ ಪತಿ ಜೊತೆ ಎಚ್ ಎಸ್ ಆರ್ ಲೇಔಟ್ ನಲ್ಲಿ ಶಾಪಿಂಗ್ ಗೆ ತೆರಳಿದ್ದರು. ಈ ವೇಳೆ ತನ್ನ ಸ್ನೇಹಿತರ ಜೊತೆ ಬಂದ ವಿರೇಶ್ ಸಂತ್ರಸ್ತ ಮಹಿಳೆಯನ್ನು ಏಕೆ ಕೆಲಸಕ್ಕೆ ಬರುತ್ತಿಲ್ಲವೆಂದು ಕೇಳಿದ್ದಾನೆ, ಪತಿಯನ್ನು ತಳ್ಳಿ ಆಕೆಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಪರಾರಿಯಾಗಿದ್ದನು. ಕೂಡಲೇ ಮಹಿಳೆ ಪತಿ ತನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾನೆ.

ನಂತರ ಆರೋಪಿ ವಿರೇಶ್ ಮನೆಗೆ ತೆರಳಿದ ಸಂತ್ರಸ್ತ ಮಹಿಳೆ ಕಡೆಯವರು ಆತನ ಮನೆಗೆ ತೆರಳ್ ಹಲ್ಲೆ ನಡೆಸಿ, ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ವಿರೇಶ್ ಕರುನಾಡು ಸುವರ್ಣ ವೇದಿಕೆಯ ಅಧ್ಯಕ್ಷರೂ ಆಗಿರುವ ವಿರೇಶ್ ಪ್ರೀತಿ ಮಾಯೆ ಹುಷಾರು ಎಂಬ ಸಿನಿಮಾದ ನಿರ್ಮಾಪಕರು ಆಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com