ನನ್ನ ಮುಂದಿನ ಸಿನೆಮಾದ ಹೆಸರು 'ಅರ್ಧ ಸತ್ಯ' ಅಲ್ಲ: ಹೇಮಂತ ರಾವ್

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾ ನಿರ್ದೇಶನದ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದ ನಿರ್ದೇಶಕ ಹೇಮಂತ್ ಎಂ ರಾವ್, ಕಳೆದ ವಾರ ತಮ್ಮ ನಿರ್ದೇಶನದ ಮುಂದಿನ ಚಿತ್ರದ ಶೀರ್ಷಿಕೆ ಘೋಷಿಸಿ,
ಹೇಮಂತ್ ಎಂ ರಾವ್
ಹೇಮಂತ್ ಎಂ ರಾವ್
ಬೆಂಗಳೂರು: 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾ ನಿರ್ದೇಶನದ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದ ನಿರ್ದೇಶಕ ಹೇಮಂತ್ ಎಂ ರಾವ್, ಕಳೆದ ವಾರ ತಮ್ಮ ನಿರ್ದೇಶನದ ಮುಂದಿನ ಚಿತ್ರದ ಶೀರ್ಷಿಕೆ ಘೋಷಿಸಿ, ಪೋಸ್ಟರ್ ಒಂದನ್ನು ಪ್ರಕಟಿಸಿದ್ದರು. ಈಗ ಆ ಶೀರ್ಷಿಕೆಯನ್ನು ಬದಲಿಸಲು ಅವರು ಮುಂದಾಗಿದ್ದಾರೆ. 
ನಿರ್ದೇಶಕ ಈಗ ನಿರ್ಮಾಪಕ ಕಾರ್ತಿಕ್ ಗೌಡ ಅವರೊಂದಿಗೆ ಕೆಲಸ ಮಾಡುತ್ತಿದ್ದು, ಈ ಸಿನೆಮಾವನ್ನು ನಟ ಪುನೀತ್ ರಾಜಕುಮಾರ್ ಸಹನಿರ್ಮಿಸಲಿದ್ದಾರೆ. 
ಈ ವಿಷಯವನ್ನು ಧೃಢೀಕರಿಸಿರುವ ಹೇಮಂತ್ "'ಅರ್ಧ ಸತ್ಯ' ಶೀರ್ಷಿಕೆಯನ್ನು ಈಗಾಗಲೇ ಮತೊಬ್ಬರು ನೊಂದಾಯಿಸಿರುವುದನ್ನು ತಿಳಿದ ಮೇಲೆ ಶೀರ್ಷಿಕೆಯನ್ನು ಬದಲಿಸಲು ಚಿಂತಿಸಿದೆ. ಆದುದರಿಂದ ಶೀಘ್ರದಲ್ಲೇ ಹೊಸ ಶೀರ್ಷಿಕೆ ನಿಶ್ಚಯಿಸಲಿದ್ದೇನೆ" ಎನ್ನುತ್ತಾರೆ. 
"ಅಲ್ಲದೆ, ವಾಣಿಜ್ಯ ಮಂಡಳಿ ಈ ಶೀರ್ಷಿಕೆ ಬಳಸಲು ಅವಕಾಶ ನೀಡಿದ್ದರೂ, ಶೀರ್ಷಿಕೆಯ ಸಲುವಾಗಿ ವಿವಾದದಲ್ಲಿ ಸಿಕ್ಕಿಕೊಳ್ಳಲು ನನಗೆ ಇಷ್ಟವಿಲ್ಲ" ಎನ್ನುತ್ತಾರೆ ಅವರು. 
ಸ್ಕ್ರಿಪ್ಟ್ ಕೆಲವನ್ನು ಬಹುತೇಕ ಮುಗಿಸಿರುವ ಹೇಮಂತ್, ತಾರಾಗಣದ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಮುಖ್ಯಪಾತ್ರದಲ್ಲಿ ಬಹುತೇಕ ಮನೀಶ್ ರಿಷಿ ನಟಿಸಲಿದ್ದಾರೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com