ಚಿತ್ರತಂಡದ ಸದಸ್ಯರೊಬ್ಬರು ತಿಳಿಸುವಂತೆ, ಇನ್ನು ಹೆಸರಿದ ಈ ಚಿತ್ರ ಕೂಡ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದೆಯಂತೆ. ಈಗ ತಂತ್ರಜ್ಞರ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸುವ ಅವರು "ಸದ್ಯಕ್ಕೆ ಸಂಗೀತಕ್ಕೆ ವಿ ಹರಿಕೃಷ ಮತ್ತು ಛಾಯಾಗ್ರಹಣಕ್ಕೆ ಶ್ರೀಶ ಕುಡುವಲ್ಲಿ ಅವರನ್ನು ಅಂತಿಮಗೊಳಿಸಲಾಗಿದೆ. ದೀಪು ಸಂಕಲನ, ಈ ಹರ್ಷ ನೃತ್ಯ ನಿರ್ದೇಶನ ಮತ್ತು ರವಿ ಸಂತೇಹೈಕ್ಳು ಕಲಾ ನಿರ್ದೇಶಕರಾಗಿ ಸೇರಲಿದ್ದಾರೆ" ಎಂದು ತಿಳಿಸುತ್ತಾರೆ.