ಭರತ್ ನಿರ್ದೇಶನದ ಈ ಸಿನೆಮಾದಲ್ಲಿ ಶಾನ್ವಿ ಶ್ರೀವಾಸ್ತವ ನಾಯಕನಟಿಯಾಗಿದ್ದು, ಜಯಣ್ಣ ಕಂಬೈನ್ಸ್ ಇದನ್ನು ನಿರ್ಮಿಸಿದೆ. ನಿಗದಿಗಿಂತಲೂ ೯೦ ದಿನ ಹೆಚ್ಚುವರಿ ಚಿತ್ರೀಕರಣ ಸಮಯ ತೆಗೆದುಕೊಂಡದ್ದರ ಬಗ್ಗೆ ತಿಳಿಸುವ ನಟ "ಹಲವಾರು ಬಾರಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಳ್ಳಬೇಕಾಯಿತು. ಏಕೆಂದರೆ ಚಿತ್ರೀಕರಣ ನಡೆಸಬೇಕಿದ್ದ ಶಾಲೆ ಮತ್ತು ಕಾಲೇಜುಗಳು ಮುಚ್ಚಿದ್ದವು. ಅಲ್ಲದೆ ಒಂದು ಹಾಡಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದೆವು, ಅದಕ್ಕಾಗಿ ಮತ್ತೆ ಚಿತ್ರೀಕಣರನ ಮಾಡಿದೆವು. ಇವೆಲ್ಲಾ ವಿಳಂಬಗಳ ಹೊರತಾಗಿಯೂ ಸಾಹೇಬ ಸಿನೆಮಾದ ಬಗ್ಗೆ ನನಗೆ ಭರವಸೆಯಿದೆ" ಎನ್ನುತ್ತಾರೆ ಮನೋರಂಜನ್.