ಹಿಂದಿನ ಯೋಜನೆಯಂತೆ ಕಳೆದ ವರ್ಷವೇ ಯೋಗರಾಜ್ ಈ ಸಿನೆಮಾವನ್ನು ಪ್ರಾರಂಭಿಸಬೇಕಿತ್ತು. ಇದಕ್ಕಾಗಿ ಪ್ರಜ್ಞಾ, ನಿಖಿತಾ ನಾರಾಯಣ್ ಮತ್ತು ವೈಶಾಲಿ ದೀಪಾಲಿ, ಮೂವರು ನಾಯಕ ನಟಿಯರನ್ನು ಆಯ್ಕೆ ಮಾಡಿದ್ದರು ಕೂಡ. ವಿ ಹರಿಕೃಷ್ಣ ಸಂಗೀತ ನೀಡಲಿದ್ದು, ಸುಜ್ಞಾನ್ ಛಾಯಾಗ್ರಹಣ ಮಾಡಲಿದ್ದಾರೆ ಎಂದು ಘೋಷಿಸಲಾಗಿತ್ತು. 'ನನ್ನ ಹೆಸರೇ ಅನುರಾಗಿ' ಎಂದು ಶೀರ್ಷಿಕೆಯನ್ನು ಕೂಡ ಅಂತಿಮಗೊಳಿಸಲಾಗಿತ್ತಿ.