ಬೆಂಗಳೂರು: ಸುದೀಪ್ ಮತ್ತು ರಮ್ಯಾ ನಟಿಸಿದ್ದ 'ಮುಸ್ಸಂಜೆ ಮಾತು' ಸಿನೆಮಾ ಖ್ಯಾತಿಯ ನಿರ್ದೇಶಕ ಮುಸ್ಸಂಜೆ ಮಹೇಶ್, ಕೈತುಂಬಾ ಕೆಲಸವನ್ನಿಟ್ಟುಕೊಂಡು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಆದಿತ್ಯ ಮತ್ತು ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿರುವ 'ನಾನೇ ನೆಕ್ಸ್ಟ್ ಸಿ ಎಂ' ಮತ್ತು ಮೇಘನಾ ರಾಜ್ ನಟಿಸಿರುವ 'ಜಿಂದಾ' ಬಿಡುಗಡೆಗೆ ಸಿದ್ಧವಾಗಿದ್ದರೆ, ಮತ್ತೆರಡು ಯೋಜನೆಗಳಿಗೆ ಚಾಲನೆ ನೀಡಲು ನಿರ್ದೇಶಕ ಸಿದ್ಧರಾಗಿದ್ದಾರೆ.