ಕೆಎಂ ಚೈತನ್ಯ ನಿರ್ದೇಶನದ ಚಿತ್ರಕ್ಕೆ ಸಂಗೀತ ಭಟ್ ಸೇರ್ಪಡೆ

'ಎರಡನೇ ಸಲ' ಸಿನೆಮಾದ ನಟನೆಗಾಗಿ ಚಿತ್ರರಂಗದ ಗಮನ ಸೆಳೆದಿದ್ದ ನಟಿ ಸಂಗೀತ ಭಟ್ ಈಗ 'ದಯವಿಟ್ಟು ಗಮನಿಸಿ' ಸಿನೆಮಾದ ವಿಡಿಯೋ ಹಾಡಿನಲ್ಲಿ ಕೂಡ ಕಾಣಿಸಿಕೊಂಡು ತಮ್ಮ ಪ್ರತಿಭೆಯನ್ನು
ನಟಿ ಸಂಗೀತ ಭಟ್
ನಟಿ ಸಂಗೀತ ಭಟ್
Updated on
ಬೆಂಗಳೂರು: 'ಎರಡನೇ ಸಲ' ಸಿನೆಮಾದ ನಟನೆಗಾಗಿ ಚಿತ್ರರಂಗದ ಗಮನ ಸೆಳೆದಿದ್ದ ನಟಿ ಸಂಗೀತ ಭಟ್ ಈಗ 'ದಯವಿಟ್ಟು ಗಮನಿಸಿ' ಸಿನೆಮಾದ ವಿಡಿಯೋ ಹಾಡಿನಲ್ಲಿ ಕೂಡ ಕಾಣಿಸಿಕೊಂಡು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ತಮ್ಮ ಫೋನು ಇತ್ತೀಚಿಗೆ ಸದಾ ರಿಂಗಣಿಸುತ್ತಲೇ ಇದೆ ಎಂದು ಒಪ್ಪಿಕೊಳ್ಳುವ ನಟಿ, ಹಲವು ನಿರ್ದೇಶಕರು ಉತ್ತಮ ಪಾತ್ರಗಳ ಅವಕಾಶ ನೀಡಲು ಮುಂದೆಬಂದಿರುವುದಾಗಿ ಹೇಳುತ್ತಾರೆ. 
ಸದ್ಯಕ್ಕೆ ಅವರು ರೋಹಿತ್ ಪದಕಿ ನಿರ್ದೇಶನದ 'ದಯವಿಟ್ಟು ಗಮನಿಸಿ' ಚಿತ್ರದಲ್ಲಿ ನಿರತರಾಗಿದ್ದಾರೆ. ನಿರ್ಮಾಪಕ ಆಶು ಬೆದ್ರ ನಾಯಕನಟನಾಗಿರುವ, 'ಕಹಿ' ಖ್ಯಾತಿಯ ಅರವಿಂದ್ ಶಾಸ್ತ್ರಿ ನಿರ್ದೇಶನದ ಇನ್ನು ಹೆಸರಿಡದ ಮತ್ತೊಂದು ಚಿತ್ರದಲ್ಲಿ ಕೂಡ ಪಾತ್ರ ಪಡೆದಿದ್ದಾರೆ. ಈಗ ಕೆ ಎಂ ಚೈತನ್ಯ ನಿರ್ದೇಶನದ ಚಿತ್ರಕ್ಕೂ ಕರೆ ಬಂದಿದ್ದು, ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಎಲ್ಲರಿಗು ಸಮತೂಕದ ಪಾತ್ರವನ್ನು ಸೃಷ್ಟಿಸುವ ನಿರ್ದೇಶಕ ಕೆ ಎಂ ಚೈತನ್ಯ ಯಾರನ್ನು ಹೀರೊ ಅಥವಾ ಹೀರೋಯಿನ್ ಎಂದು ವರ್ಗೀಕರಿಸಲು ಹೋಗುವುದಿಲ್ಲ. 
ಬೆಳ್ಳಿತೆರೆಯಲ್ಲಿ ಕೆ ಎಂ ಚೈತನ್ಯ ಜೊತೆಗೆ ಸಂಗೀತ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದರೂ, ಅವರ ಸಹಯೋಗ ಮೈಸೂರು ರೇಷ್ಮೆ ಜಾಹಿರಾತಿನದ್ದಂತೆ. "ಅವರು 'ಆ ದಿನಗಳು' ನಿರ್ದೇಶಿದಾಗಿಲಿಂದಲೂ ಚೈತನ್ಯ ಜೊತೆಗೆ ಕೆಲಸ ಮಾಡಲು ನಾನು ಹಾತೊರೆಯುತ್ತಿದ್ದೆ. ಮಾಮೂಲಿತನವನ್ನು ತೊರೆದು ಚಿಂತಿಸುವ ನಿರ್ದೇಶಕ ಚೈತನ್ಯ" ಎನ್ನುತ್ತಾರೆ ಸಂಗೀತ. 
ಉಳಿದ ತಾರಾಗಣವನ್ನು ಅಂತಿಮಗೊಳಿಸುತ್ತಿರುವ ನಿರ್ದೇಶಕ ಚೈತನ್ಯ ಜೂನ್ ಅಂತ್ಯಕ್ಕೆ ನೂತನ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com