ಮೈಸೂರು ಡೈರೀಸ್ ಬಗ್ಗೆ ಉತ್ಸುಕರಾಗಿರುವ ನಟ ಪ್ರಭು

ಕಿರಿಕ್ ಪಾರ್ಟಿ’ ಖ್ಯಾತಿಯ ಧನಂಜಯ್ ರಂಜನ್ ನಿರ್ದೇಶನ ಮಾಡುತ್ತಿರುವ ಮೈಸೂರು ಡೈರೀಸ್ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ನಟ ಪ್ರಭು ...
ಪ್ರಭು
ಪ್ರಭು
ಬೆಂಗಳೂರು:  ‘ಕಿರಿಕ್ ಪಾರ್ಟಿ’ ಖ್ಯಾತಿಯ ಧನಂಜಯ್ ರಂಜನ್ ನಿರ್ದೇಶನ ಮಾಡುತ್ತಿರುವ ಮೈಸೂರು ಡೈರೀಸ್ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ನಟ ಪ್ರಭು ಮಂಡುಕರ್ ಸಿನಿಮಾ ಬಗ್ಗೆ ತೀವ್ರ ಉತ್ಸುಕರಾಗಿದ್ದಾರೆ.
ಈ ಸಿನಿಮಾ ಮಾಡಲು ನಾನು ಒಪ್ಪಿಕೊಂಡಿದ್ದಕ್ಕೆ ಮೊದಲ ಕಾರಣ, ಚರಣ್ ರಾಜ್ ಸಂಗೀತ ನಿರ್ದೇಶನ, ಹಾಗೂ ಈ ಸಿನಿಮಾ ಸಾಫ್ಟ್ ವೇರ್ ಎಂಜಿನೀಯರ್ ಜೀವನಕ್ಕೆ ಸಂಬಂಧಿಸಿದ ಕಥೆ ಹೊಂದಿದೆ. ಹಾಗೂ ನೈಜ ಜೀವನದ ಕಥೆಯ ಪುನರ್ ಸೃಷ್ಟಿಯಾಗಿದೆ. ನಿರ್ದೇಶಕರು ಉತ್ತಮ ಅನುಭವಿಯಾಗಿದ್ದಾರೆ.ಇದು ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. 
ಬೆಂಗಳೂರಿನಲ್ಲಿ ಕೆಲ ಭಾಗದ ಚಿತ್ರೀಕರಣ ಮುಗಿಸಿದ್ದು, ನವೆಂಬರ್ 5 ರಿಂದ ಮೈಸೂರಿನಲ್ಲಿ ಶೂಟಿಂಗ್ ಆರಂಭವಾಗುವುದು ಎಂದು ನಟ ಪ್ರಭು ತಿಳಿಸಿದ್ದಾರೆ.ದೀಪಕ್ ಕೃಷ್ಣ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಪಾವನಾ ನಾಯಕಿಯಾಗಿ ನಟಿಸುತ್ತಿದ್ದಾರೆ.ಮೈಸೂರು ನಗರದ ಸಂಸ್ಕೃತಿ, ಸೌಂದರ್ಯ ಮತ್ತು ಜೀವನ ಶೈಲಿ ಕುರಿತಾದ ಸಿನಿಮಾ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com