ಮಂಡ್ಯ: ‘ತಿಥಿ’ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಮಂಡ್ಯ ತಾಲ್ಲೂಕಿನ ಹುಲಿಕೆರೆ ಕೊಪ್ಪಲು ಗ್ರಾಮದ ಎಚ್.ಎನ್.ಅಭಿಷೇಕ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇದೇ ನ.14, 15ರಂದು ಅವರ ವಿವಾಹವು ಅದೇ ಗ್ರಾಮದ ಹೊಂಬಾಳೆ (ಕಾವ್ಯಾ) ಅವರೊಡನೆ ನಡೆಯಲಿದೆ.ಮಂಡ್ಯ ನಗರದ ಎಂ.ಸಿ.ರಸ್ತೆಯ ಶ್ರೀ ಆಂಜನೇಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿತವಾಗಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ 'ತಿಥಿ' ಚಿತ್ರದ ನಂತರ ಜನಪ್ರಿಯತೆ ಗಳಿಸಿದ ಅಭಿ ತರ್ಲೆ ವಿಲೇಜ್, ಏನ್ ನಿನ್ ಪ್ರಾಬ್ಲಮ್ಮು, ಹಳ್ಳಿ ಪಂಚಾಯ್ತಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.