"ಪ್ರತಿಯೊಬ್ಬರೂ ಸಿನಿಮಾ ಎಂದರೆ ಅದರ ಕಲೆಕ್ಷನ್ ವಿಚಾರವಾಗಿಯೇ ಮಹತ್ವ ನೀಡುತ್ತಾರೆ .ಆದರೆ ನನಗೆ ಸಿನೆಮಾ ಅದಕ್ಕಿಂತ ಹೆಚ್ಚಿನದಾಗಿದೆ. ಸಿನೆಮಾ ಮತ್ತು ಸಾಮಾಜಿಕ ಜವಾಬ್ದಾರಿ ಎರಡೂ ಸಹ ಪರಸ್ಪರ ಪೂರಕವಾಗಿರಬೇಕು. ಚಿತ್ರರಂಗವು ಸಮಾಜದಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ," ಚೇತನ್ ಅವರ ಮುಂಬರುವ ಚಿತ್ರ 'ಅತಿರಥ' ದಲ್ಲಿ ಅವರು ಪತ್ರಕರ್ತನ ಪಾತ್ರ ನಿರ್ವಹಿಸಿದ್ದಾರೆ. "ನಾನು ಮಾಧ್ಯಮ ಮತ್ತು ಪತ್ರಿಕೋದ್ಯಮವನ್ನು ಬಹಳ ಗೌರವಿಸುತ್ತೇನೆ. ಅನೇಕ ವಿಧಗಳಲ್ಲಿ ಅವರು ನಮ್ಮೆಲ್ಲರಿಗೂ ಶಿಕ್ಷಕರಂತಿದ್ದಾರೆ. ಏಕೆಂದರೆ ಅವರು ಹಲವಾರು ವಿಷಯಗಳ ಬಗ್ಗೆ ನಮಗೆ ತಿಳಿಸಿ ಕೊಡುತ್ತಾರೆ. ಮಾಧ್ಯಮವು ಯುವಕರ ಜೀವನವನ್ನು, ಮನಸ್ಸನ್ನು ಪ್ರಭಾವಿಸುತ್ತದೆ. ನಾನು 'ಅತಿರಥ' ಚಿತ್ರದಲ್ಲಿ ಟಿವಿ ಆಂಕರ್ ಪಾತ್ರ ಮಾಡುತ್ತಿದ್ದೇನೆ."