ನಿರ್ದೇಶನ ನನ್ನ ಕಳೆದ 15 ವರ್ಷಗಳ ಆಸೆ, ಆದರೆ ನಟನಾ ವೃತ್ತಿಯಲ್ಲಿ ನಾನು ನಿರತಳಾದ್ದರಿಂದ ಈ ಆಸೆಯನ್ನು ಹಾಗೆಯೇ ಇಟ್ಟಿದ್ದೆ, ಜೊತೆಗೆ ನನಗೆ ಹೇಗೆ ಸಬ್ಜೆಕ್ಟ್ ತೆಗೆದುಕೊಳ್ಳಬೇಕು ಹೇಗೆ ಆರಿಸಿಕೊಳ್ಳಬೇಕು ಎಂಬ ಹಿನ್ನೆಲೆ ಗೊತ್ತಿರಲಿಲ್ಲ, ಸಮಾಜವನ್ನು ಶಾಂತಿಯುತವಾಗಿಸುವ ಕಥೆ ನೀಡಬೇಕೆಂಬುದು ನನ್ನ ಬಯಕೆಯಾಗಿತ್ತು. ಲಕ್ಷ್ಮಿ ನಾರಾಯಣನ ಪ್ರಪಂಚಾನೇ ಬೇರೆಯಲ್ಲಿ ಅದೆಲ್ಲಾ ಈಡೇರಿದೆ. ನನ್ನ ಪತಿ ಜ್ಯೋತಿ ಪ್ರಕಾಶ್, ಈ ಸಿನಿಮಾದ ಹೃದಯ, ಇದು ಹಿಂದಿಯ ಕಥೆಯಾಗಿದೆ, ಅದನ್ನು ಕನ್ನಡಕ್ಕೆ ಒಗ್ಗುವ ರೀತಿಯಲ್ಲಿ ನಿರ್ದೇಶನ ಹಾಗೂ ನಿರ್ಮಾಣ ಮಾಡಲಾಗಿದೆ. ಅದು ಬಹಳ ಸಮಯ ಹಿಡಿಯಿತು.