ಮೆರ್ಸಲ್ ಚಿತ್ರದ ಜಿಎಸ್ ಟಿ ಸಂಭಾಷಣೆಗೆ ಕತ್ತರಿ ಹಾಕಬೇಡಿ: ಬೆಂಬಲಕ್ಕೆ ನಿಂತ ಕಮಲ ಹಾಸನ್

ವಿಜಯ್ ಅಭಿನಯದ ಮೆರ್ಸೆಲ್ ಸಿನಿಮಾದಲ್ಲಿ ಜಿಎಸ್ ಟಿ ಕುರಿತ ಸಂಭಾಷಣೆಗೆ ತಮಿಳುನಾಡು ಬಿಜೆಪಿ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಭಾಷಣೆಗೆ ಕತ್ತರಿ ..
ವಿಜಯ್
ವಿಜಯ್
Updated on
ಚೆನ್ನೈ: ವಿಜಯ್ ಅಭಿನಯದ ಮೆರ್ಸೆಲ್ ಸಿನಿಮಾದಲ್ಲಿ ಜಿಎಸ್ ಟಿ ಕುರಿತ ಸಂಭಾಷಣೆಗೆ ತಮಿಳುನಾಡು ಬಿಜೆಪಿ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ  ಭಾಷಣೆಗೆ ಕತ್ತರಿ ಹಾಕಲು ನಿರ್ಧರಿಸಿದ ಹಿನ್ನೆಲೆಯಲ್ಲಿ  ಕಮಲ್ ಹಾಸನ್ ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ. 
ಟೀಕೆಗಳನ್ನು ಮೌನವಾಗಿರಿಸಿಬೇಡಿ, ಮಾತನಾಡಲು ಆರಂಭಿಸಿದರೇ ಭಾರತ ಹೊಳೆಯುತ್ತದೆ, ಮೆರ್ಸೆಲ್ ದೆ ಪ್ರಮಾಣ ಪತ್ರ ದೊರೆತಿದೆ. ಮತ್ತೆ ಸೆನ್ಸಾರ್ ಮಾಡಬೇಡಿ, ತಾರ್ಕಿಕ ಪ್ರತಿಕ್ರಿಯೆಯೊಂದಿಗೆ ಪ್ರತಿ ಟೀಕೆ ಮಾಡಿ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.
ಚಿತ್ರದಲ್ಲಿ ರಾಜಕೀಯದ  ಬಗ್ಗೆ ನೇರವಾಗಿ ಎಲ್ಲೂ ಮಾತನಾಡದೇ ಇದ್ದರೂ ಇತ್ತೀಚೆಗಷ್ಟೇ ಜಾರಿಯಾದ ಜಿಎಸ್ ಟಿ, ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಸ್ತಾಪವಿದ್ದು, ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ ಚಿತ್ರದ ವಿವಾದಾತ್ಮಕ  ಸಂಭಾಷಣೆಗೆ ಕತ್ತರಿ ಹಾಕಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಒಂದು ವೇಳೆ ಚಿತ್ರತಂಡ ಸಂಭಾಷಣೆಗೆ ಕತ್ತರಿ ಹಾಕದಿದ್ದರೆ ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ವಿಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ಮೆರ್ಸಲ್ ಬುಧವಾರ ಬಿಡುಗಡೆಯಾಗಿದ್ದು, ತ್ರಿಪಾತ್ರದಲ್ಲಿ ನಟ ವಿಜಯ್ ಅಭಿನಯಿಸಿದ್ದಾರೆ. ರಜನಿಕಾಂತ್ ನಂತರ ತಮಿಳಿನಲ್ಲಿ ಅತಿ ಹೆಚ್ಚು ವಿಜಯ್ ಜನಪ್ರಿಯ ನಟರಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com