ಡೆಂಗ್ಯೂ ತಡೆಗಟ್ಟಲು ಬಳಕೆ ಮಾಡುತ್ತಿರುವ ಗಿಡಮೂಲಿಕೆಗಳಿಂದ ಅಡ್ಡಪರಿಣಾಮಗಳು ಉಂತಾಗುತ್ತವೆ, ಆದ್ದರಿಂದ ಆ ಗಿಡಮೂಲಿಕೆಗಳನ್ನು ಬಳಕೆ ಮಾಡದಂತೆ ಅಭಿಮಾನಿಗಳಿಗೆ ಕಮಲ್ ಹಾಸನ್ ಕರೆ ನೀಡಿದ್ದರು. ಗಿಡಮೂಲಿಕೆಯ ಬಗ್ಗೆ ಟ್ವೀಟ್ ಮಾಡಿರುವ ಕಮಲ್ ಹಾಸನ್, ಅದರಿಂದ ಅಡ್ದ ಪರಿಣಾಮಗಳು ಉಂಟಾಗುತ್ತವೆ ಎಂಬುದಕ್ಕೆ ನಿರ್ದಿಷ್ಟ ಆಧಾರ ನೀಡಿಲ್ಲ. ಒಂದು ವೇಳೆ ಕಮಲ ಹಾಸನ್ ಅವರೇ ನಿಲವೇಂಬು ಕುಡಿನೀರ್ ನ್ನು ಸೇವಿಸಿ ಅಡ್ಡಪರಿಣಾಮ ಎದುರಿಸಿದ್ದರೆ ಅದರ ಬಗ್ಗೆ ಮಾಹಿತಿ ನೀಡಿ ನಂತರ ಹೇಳಬೇಕಿತ್ತು ಎಂದು ಅಡ್ವೊಕೇಟ್ ಜಿ.ದೇವರಾಜನ್ ಹೇಳಿದ್ದಾರೆ.