ದುನಿಯಾ ವಿಜಯ್
ಸಿನಿಮಾ ಸುದ್ದಿ
ಕನ್ನಡ ರಾಜ್ಯೋತ್ಸವಕ್ಕೆ ಕನಕ ಮೊದಲ ಟ್ರೇಲರ್ ಬಿಡುಗಡೆ
ಆರ್ .ಚಂದ್ರು ನಿರ್ದೇಶನದ ದುನಿಯಾ ವಿಜಯ್ ನಟನೆಯ ಕನಕ ಸಿನಿಮಾ ಶೂಟಿಂಗ್ ಪೂರ್ಣದೊಂಡಿದ್ದು, ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದಂದು...
ಬೆಂಗಳೂರು: ಆರ್ ಚಂದ್ರು ನಿರ್ದೇಶನದ ದುನಿಯಾ ವಿಜಯ್ ನಟನೆಯ ಕನಕ ಸಿನಿಮಾ ಶೂಟಿಂಗ್ ಪೂರ್ಣದೊಂಡಿದ್ದು, ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದಂದು, ಸಿನಿಮಾದ ಮೊದಲ ಟ್ರೇಲರ್ ರಿಲೀಸ್ ಆಗಲಿದೆ.
ವಿಜಯ್, ಸಿನಿಮಾದಲ್ಲಿ ರಾಜ್ ಕುಮಾರ್ ಅವರ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಹೀಗಾಗಿ ಕನ್ನಡ ರಾಜ್ಯೋತ್ಸವದಂದು ಟ್ರೇಲರ್ ಬಿಡುಗಡೆಯಾಗಲಿದೆ.
ದುನಿಯಾ ವಿಜಿ ಹಾಗೂ ಹರಿಪ್ರಿಯಾ ನಟಿಸಿರುವ ಸಿನಿಮಾ. ದುನಿಯಾ ವಿಜಿ ಆಟೋ ಡ್ರೈವರ್ ಆಗಿ, ರಾಜ್ ಅಭಿಮಾನಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ಸೆಟ್ಟೇರಿದ ದಿನದಿಂದ ಕುತೂಹಲ ಹುಟ್ಟಿಸಿದೆ.
ತಾಜ್ಮಹಲ್, ಚಾರ್ಮಿನಾರ್, ಮೈಲಾರಿ, ಬ್ರಹ್ಮ, ಮಳೆ.. ಹೀಗೆ ವಿಭಿನ್ನ ಚಿತ್ರಗಳನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಕಟ್ಟಿಕೊಟ್ಟ ನಿರ್ದೇಶಕ ಆರ್. ಚಂದ್ರು. ಹೀಗಾಗಿಯೇ ಚಂದ್ರು ಮತ್ತು ದುನಿಯಾ ವಿಜಿ ಜುಗಲ್ಬಂದಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ