ಕೊಯಂಬತ್ತೂರು:ಸಿಂಗಾಪೂರದಲ್ಲಿ ಉಚಿತ ವೈದ್ಯಕೀಯ ಸೇವೆ ನೀಡುವುದು ಸಾಬೀತಾದರೆ ನಟ ವಿಜಯ್ ಮತ್ತು ಅವರ ಮರ್ಸಲ್ ಚಿತ್ರದ ನಿರ್ಮಾಪಕರಿಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಕಾನೂನು ವಿದ್ಯಾರ್ಥಿಗಳ ಗುಂಪೊಂದು ಸವಾಲು ಹಾಕಿದೆ.
ಒಂದು ವೇಳೆ ಸಾಬೀತುಪಡಿಸಲು ವಿಫಲರಾದರೆ ಯಾವುದೇ ಆಧಾರಗಳಿಲ್ಲದೆ ತಮ್ಮ ಚಿತ್ರದಲ್ಲಿ ಜನತೆಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಒಂದು ಕೋಟಿ ರೂಪಾಯಿ ನೀಡಬೇಕೆಂದು ನಿರ್ಮಾಪಕರು ಮತ್ತು ವಿಜಯ್ ಅವರಿಗೆ ಕಾನೂನು ವಿದ್ಯಾರ್ಥಿಗಳ ಗುಂಪು ಪೊಲೀಸರಿಗೆ ಸಲ್ಲಿಸಿದ ಅರ್ಜಿಯಲ್ಲಿ ಸವಾಲು ಹಾಕಿದ್ದಾರೆ.
ನಟ ವಿಜಯ್ ಅಭಿನಯದ ಮರ್ಸೆಲ್ ಚಿತ್ರದಲ್ಲಿ ಸಿಂಗಾಪೂರದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ ಎಂಬ ಸಂಭಾಷಣೆಯೊಂದು ಬರುತ್ತದೆ. ಈ ರೀತಿ ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರದ ವಿರುದ್ಧ ಜನರನ್ನು ಪ್ರೇರೇಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.