ಬೆಂಗಳೂರು: ನಟ ನಿರ್ದೇಶಕ ಎಂಜಿ ಶ್ರೀನಿವಾಸ್ ಅವರ ಬೀರ್ಬಲ್-ಟ್ರಯಾಲಜಿಗೆ ಕೊನೆಗೂ ನಾಯಕಿ ಅಂತಿಮವಾಗಿದ್ದಾಳೆ
‘ಫೈಂಡಿಂಗ್ ವಜ್ರಮುನಿ’ ಎಂದು ಹೊರಟಿರುವ ‘ಬೀರ್ಬಲ್’ಗೆ ಕೊನೆಗೂ ರುಕ್ಮಿಣಿ ಸಿಕ್ಕಿದ್ದಾಳೆ. ‘ಬೀರ್ಬಲ್ – ಟ್ರಯಾಲಜಿ ಎಂದು ಇದು ಮೂರು ಸರಣಿಯಲ್ಲಿ ಬರಲಿದ್ದು, ಮೂರು ಪ್ರತ್ಯೇಕ ಸಿನಿಮಾಗಳಾಗಿ ಬರಲಿವೆ.
ಅದರಲ್ಲಿ ಮೊದಲ ಭಾಗ, ಅಂದರೆ ‘ಬೀರ್ಬಲ್, ಕೇಸ್ 1- ಫೈಂಡಿಂಗ್ ವಜ್ರಮುನಿ’ಗೆ ರುಕ್ಮಿಣಿ ವಸಂತ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಕರ್ನಲ್ ವಸಂತ್ ಹಾಗೂ ಸುಭಾಷಿಣಿ ವಸಂತ್ ಅವರ ಪುತ್ರಿಯಾಗಿರುವ ರುಕ್ಮಿಣಿ ಈ ಮೂಲಕ ಇದೇ ಮೊದಲಬಾರಿಗೆ ಬೆಳ್ಳಿತೆರೆಯ ಮೇಲೆ ನಾಯಕಿಯಾಗಿ ಕಾಣಿಸಿ ಕೊಳ್ಳಲಿದ್ದಾರೆ. ಮೈಸೂರಿನಲ್ಲಿ ನಡೆದ ಆಡಿಶನ್ ನಲ್ಲಿ ಹೊಸ ಪ್ರತಿಭೆ ಭರತ ನಾಟ್ಯ ಕಲಾವಿದೆಯಾಗಿರುವ ರುಕ್ಷ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ.
‘ಬೀರ್ಬಲ್, ಕೇಸ್-1 ಫೈಂಡಿಂಗ್ ವಜ್ರಮುನಿ’ ಮೊದಲ ಭಾಗ. ಇದರಲ್ಲಿ ನನ್ನ ಜತೆಗೆ ನಾಯಕಿಯಾಗಿ ರುಕ್ಮಿಣಿ ಲಾಯರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ’ ಎನ್ನುತ್ತಾರೆ ಶ್ರೀನಿವಾಸ್.
ಕೇಸ್ 2 ಮತ್ತು ಕೇಸ್ 3 ಅಂದರೆ ಅವ್ರನ್ ಬಿಟ್ ಇವ್ರನ್ ಬಿಟ್ ಅವರ್ ಯಾರು?’ ಹಾಗೂ ‘ತುರೆಮಣೆ’ ಚಿತ್ರಗಳು ಒಂದೊಂದು ವರ್ಷದ ಅಂತರದಲ್ಲಿ ಬಿಡುಗಡೆ ಆಗಲಿವೆ. ಉಳಿದಂತೆ ಸಿನಿಮಾದಲ್ಲಿ ಅಚ್ಯುತ ಕುಮಾರ್, ಸುಜಯ್ ಶಾಸ್ತ್ರಿ ಮತ್ತು ದತ್ತಣ್ಣ ಮುಂತಾದವರು ನಟಿಸಿದ್ದಾರೆ.