ಸಿನಿಮಾ ಸುದ್ದಿ
ಕಂಗನಾ ರಣಾವತ್ ವಿರುದ್ಧ ಕಾನೂನು ಹೋರಾಟ: ಆದಿತ್ಯ ರಾವ್ ಪಾಂಚೋಲಿ
ನಟಿ ಕಂಗನಾ ರಣಾವತ್ ಮತ್ತೆ ಸುದ್ದಿಯಲ್ಲಿದ್ದಾರೆ. ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಕ್ವೀನ್ ವಿವಾದಪ್ರಿಯೆ. ಇತ್ತೀಚೆಗೆ ಖಾಸಗಿ ಚಾನೆಲ್ ವೊಂದರಲ್ಲಿ...
ಮುಂಬಯಿ: ನಟಿ ಕಂಗನಾ ರಣಾವತ್ ಮತ್ತೆ ಸುದ್ದಿಯಲ್ಲಿದ್ದಾರೆ. ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಕ್ವೀನ್ ವಿವಾದಪ್ರಿಯೆ. ಇತ್ತೀಚೆಗೆ ಖಾಸಗಿ ಚಾನೆಲ್ ವೊಂದರಲ್ಲಿ ನೀಡಿದ ಸಂದರ್ಶನದಲ್ಲಿ ಹಿರಿಯ ನಟ ಅದಿತ್ಯ ಪಾಂಚೋಲಿ ಬಗ್ಗೆ ನೀಡಿರುವ ಹೇಳಿಕೆ ಎಲ್ಲರಿಗೂ ಆಘಾತ ತಂದಿದೆ.
ಕಂಗನಾ ಹೇಳಿಕೆಯಿಂದ ತೀವ್ರ ವಿಚಲಿತರಾಗಿರುವ ಆದಿತ್ಯ ಪಾಂಚೋಲಿ, ಆಕೆ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
ನೀವು ಆಕೆಯ ಸಂದರ್ಶನ ನೋಡಿದೀರಾ, ಆಕೆಯೊಬ್ಬಳು ಹುಚ್ಚಿ, ಕಂಗನಾ ಮಾತನಾಡುತ್ತಿದ್ದರೇ ಹುಚ್ಚು ವ್ಯಕ್ತಿ ಮಾತನಾಡುತ್ತಿರುವ ಅನುಭವವಾಗುತ್ತಿತ್ತು, ನಾನು ಇಂಡಸ್ಚ್ರಿಯಲ್ಲಿ ದೀರ್ಘಕಾಲದಿಂದ ಇದ್ದೇನೆ, ಯಾರೋಬ್ಬರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ಅವಳೊಬ್ಬಳು ಹುಚ್ಚಿಯ ಬಗ್ಗೆ ನಾನು ಏನನ್ನೂ ಹೇಳಲಾರೆ, ಕೊಚ್ಚೆಗೆ ಕಲ್ಲು ಎಸೆದರೇ, ಅದು ನಮ್ಮ ಬಟ್ಟೆಯನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ.
ಆಕೆ ಹೇಳುತ್ತಿರುವುದೆಲ್ಲಾ ಸುಳ್ಳು, ಹೀಗಾಗಿ ಆಕೆ ವಿರುದ್ಧ ಕಾನೂನು ಹೋರಾಟ ಕೈಗೊಳ್ಳುತ್ತೇನೆ, ನನ್ನ ಬಗ್ಗೆ ಆಕೆ ಹೇಳಿದ ಸುಳ್ಳು ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ. ನಾನು ಮತ್ತು ನನ್ನ ಪತ್ನಿ ಇಬ್ಬರು ಆಕೆಯ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.