ಗೌರಿ ಲಂಕೇಶ್ ಹತ್ಯೆಗೆ ಬಾಲಿವುಡ್ ಗಣ್ಯರ ಸಂತಾಪ: ಹಂತಕರ ಶಿಕ್ಷೆಗೆ ಆಗ್ರಹ

ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಗೆ ಬಾಲಿವುಡ್ ತೀವ್ರ ಆಘಾತ ವ್ಯಕ್ತ ಪಡಿಸಿದೆ. ಬಾಲಿವುಡ್ ಸೆಲಿಬ್ರಿಟಿಗಳಾದ ಜಾವೇದ್ ಅಖ್ತರ್, ಶಬನಾ ಆಜ್ಮಿ,
ಗೌರಿ ಲಂಕೇಶ್
ಗೌರಿ ಲಂಕೇಶ್
ನವದೆಹಲಿ: ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಗೆ ಬಾಲಿವುಡ್ ತೀವ್ರ ಆಘಾತ ವ್ಯಕ್ತ ಪಡಿಸಿದೆ. 
ಬಾಲಿವುಡ್ ಸೆಲಿಬ್ರಿಟಿಗಳಾದ ಜಾವೇದ್ ಅಖ್ತರ್, ಶಬನಾ ಆಜ್ಮಿ, ಮತ್ತು ನಂದಿತಾ ದಾಸ್ ಸೇರಿದಂತೆ ಹಲವರು ಗೌರಿ ಸಾವಿಗೆ ಟ್ವಿಟ್ಟರ್ ನಲ್ಲಿ  ಆಘಾತ ವ್ಯಕ್ತ ಪಡಿಸಿ, ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದಲ್ಲಿ ಗೌರಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. 
ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಮತ್ತು ಈಗ ಗೌರಿ ಲಂಕೇಶ್ ಎಂದು ಜಾವೇದ್ ಅಕ್ತರ್ ಟ್ವೀಟ್ ಮಾಡಿದ್ದಾರೆ.
ಇನ್ನೂ ಗೌರಿ ಹತ್ಯೆಯ ಹಂತಕರಿಗೆ ಶಿಕ್ಷೆಯಾಗಬೇಕು ಎಂದು ಶಬಾನಾ ಆಜ್ಮಿ ಟ್ವೀಟ್ ಮಾಡಿದ್ದಾರೆ, ಪನ್ಸಾರೆ , ಕಲಬುರ್ಗಿ ಹಂತಕರಿಗೂ ಶಿಕ್ಷೆಯಾಗಬೇಕು ಎಂದು ಟ್ವೀಟಿಸಿದ್ದಾರೆ.
ನಂದಿತಾ ದಾಸ್, ಶಿರೀಸ್ ಕುಂದರ್, ಪ್ರಿಯಾ ಗುಪ್ತಾ, ತೇಜಸ್ವಿ ಸೂರ್ಯ ಸೇರಿದಂತೆ ಹಲವಾರು ಬಾಲಿವುಡ್ ಗಣ್ಯರು ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ,ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com