ನಿರ್ದೇಶಕ ಕಿರಣ್ ರಾಜ್ ಗೆ ಚಿಕ್ಕಂದಿನಿಂದಲೂ ನಾಟಕದ ಬಗ್ಗೆ ಹೆಚ್ಚಿನ ಒಲವು, 10ನೇ ತರಗತಿ ಪೂರ್ಣಗೊಂಡ ನಂತರ, ಆರ್ಥಿಕ ಸಂಕಷ್ಟದಿಂದಾಗಿ ಕಾಲೇಜು ವಿದ್ಯಾಭ್ಯಾಸ ಸ್ಥಗಿತಗೊಳಿಸಲಾಯಿತು. ಹೀಗಾಗಿ ಕರೆಸ್ಪಾಂಡೆನ್ಸ್ ನಲ್ಲಿ ಪದವಿ ಮುಗಿಸಿದರು, ಬಾರ್ ನಲ್ಲಿ ವೈಟರ್, ನಂತರ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್,ಸೇರಿದಂತೆ ಹಲವು ನೌಕರಿಗಳನ್ನು ಮಾಡಿದರು. ಆದರೆ ತಮ್ಮ ನಾಟಕದ ಹುಚ್ಚು ಮಾತ್ರ ಅಂತ್ಯಗೊಳ್ಳಲಿಲ್ಲ, ನಾನು ಶಾಲೆಯಲ್ಲಿದ್ದಾಗ ನನ್ನ ಕಥೆಗಳನ್ನು ನಾನು ಬರೆಯುತ್ತಿದ್ದೆ. ಅದನ್ನು ನಾನು ಅಭಿನಯ ಕೂಡ ಮಾಡುತ್ತಿದ್ದೆ. ನಂತರ ನಾನು ಬೆಂಗಳೂರಿಗೆ ಬಂದು ಸಿನಿಮಾ ಮಾಡುವ ಕನಸು ಕಾಣಲು ಆರಂಭಿಸಿದೆ ಎಂದು ಕಿರಣ್ ರಾಜ್ ಹೇಳಿದ್ದಾರೆ.